ಪುತ್ತೂರು: ಹಲ್ಲೆಯತ್ನ,ಕೊಲೆ ಬೆದರಿಕೆ-ಪೊಲೀಸರಿಗೆ ದೂರು

0

ಪುತ್ತೂರು:ಪಂಚಾಯತ್ ಅಧಿಕಾರಿಗಳು ರಸ್ತೆ ಅಳತೆಗೆ ಬಂದಿದ್ದ ವೇಳೆ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಪಡ್ನೂರು ಗ್ರಾಮದ ರಾಮನಗರ ಬಡಾವಣೆಯ ಸುದರ್ಶನ್ ಗೌಡ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.


ಜೂ.27ರಂದು ಮಧ್ಯಾಹ್ನ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಪಂಚಾಯತ್ ಅಧಿಕಾರಿಗಳು,ಜಿ.ಪಂ.ಅಭಿಯಂತರರು, ಪಂಚಾಯತ್ ಜನಪ್ರತಿನಿಧಿ ಸದಸ್ಯರು ಪಂಚಾಯತ್ ರಸ್ತೆ ಅಳತೆಗೆ ಬಂದಿದ್ದಾಗ ನಿತೇಶ್ ನಾಯ್ಕ್ ಮತ್ತು ಆತನ ತಂದೆ ವಸಂತ ನಾಯ್ಕ್ ಯಾನೆ ಜಗನ್ನಾಥ ನಾಯ್ಕ್ ಅವರು ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಸುದರ್ಶನ್ ಗೌಡ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here