ಕಬಕದಲ್ಲಿ ಬಿಜೆಪಿ ಸುಳ್ಳುಗಳಿಗೆ ಉತ್ತರ ಜನಜಾಗೃತಿ ಸಭೆ

0

ನಿಮ್ಮ 13 ಸುಳ್ಳುಗಳಿಗೆ ಉತ್ತರ ನೀಡುತ್ತೇವೆ ಬನ್ನಿ : ಶಾಸಕ ಅಶೋಕ್‌ ರೈ


ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ವತಿಯಿಂದ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿ 13 ಸುಳ್ಳುಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟಿದ್ದಾರೆ, ತೇಲಿ ಬಿಟ್ಟ 13 ಸುಳ್ಳುಗಳನ್ನು ವಶಕ್ಕೆ ಪಡೆದು ಅದಕ್ಕೆ ಉತ್ತರ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಬಿಜೆಪಿಗರಿಗೂ ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಕಬಕದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಬಿಜೆಪಿಯವರ ಸುಳ್ಳುಗಳಿಗೆ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಬಡವರ ವಿರೋಧಿಯಾಗಿದೆ, ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಜನೋಪಯೋಗಿ ಕಾರ್ಯಕ್ರಮ ಮಾಡಿಲ್ಲ,ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ,ಕೇಂದ್ರ ಸರಕಾರ ಬಡವರ ಪರ ಏನು ಯೋಜನೆ ತಂದಿದೆ ಎಂದು ಪ್ರಶ್ನಿಸಿದ ಶಾಸಕರು ಬಿಜೆಪಿ ಅಂಬಾನಿ, ಅದಾನಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಿಸಾನ್ ಸಮ್ಮಾನ್ ಎಲ್ಲಿ ಹೋಯಿತು:
ಇಲ್ಲಿನ ಕೃಷಿಕರಿಗೆ ಕೇಂದ್ರದ ಮೋದಿ ಸರಕಾರ ವರ್ಷಕ್ಕೆ ಎರಡು ಬಾರಿ ಕೊಡುತ್ತಿದ್ದ ಎರಡು ಸಾವಿರ ಕಿಸಾನ್ ಸಮ್ಮಾನ್ ಯೋಜನೆಯನ್ನು ಸದ್ದಿಲ್ಲದೆ ರದ್ದು ಮಾಡಿದ್ದಾರೆ. ಆ ಹಣ ಬರುತ್ತಿರುವಾಗ ಏನು ಪ್ರಚಾರ ಮಾಡುತ್ತಿದ್ದರು, ಏನು ಬೊಬ್ಬೆ ಹೊಡೆಯುತ್ತಿದ್ದರು ಈಗ ಯಾಕೆ ನಿಲ್ಲಿಸಿದ್ದು ಎಂದು ಜನರಿಗೆ ಬಿಜೆಪಿ ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.

ಪೊಲೀಸ್ ವ್ಯವಸ್ಥೆ ಗಟ್ಟಿ ಮಾಡಿದ್ದೇವೆ:
ಸುಳ್ಳುಭಾಷಣ ಮಾಡಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅದರ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದ ಬಿಜೆಪಿಯವರು ಈಗ ಯಾಕೆ ಬಾಲ ಬಿಚ್ಚುತ್ತಿಲ್ಲ. ಬಾಲ ಬಿಚ್ಚುವ ಧೈರ್ಯ ಈಗ ಇಲ್ಲ .ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಸುಳ್ಳು ಭಾಷಣಕಾರರನ್ನು ಚಡ್ಡಿಯಲ್ಲಿ ನಿಲ್ಲಿಸಿ ಪೊಟೋ ತೆಗೆದು ಪೊಲೀಸರು ಬೆವರು ಇಳಿಸಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ಗಟ್ಟಿ ಮಾಡಿ ದುಷ್ಟರನ್ನು ಮೂಲೆಗೆ ಸೇರಿಸಿದ್ದೇವೆ. ಇನ್ನು ಬಾಲ ಬಿಚ್ಚಿದರೆ ನಮ್ಮ ಸರಕಾರ ಸುಮ್ಮನೆ ಇರುವುದಿಲ್ಲ. ಪ್ರಚೋದನಕಾರಿ ಮಾತನಾಡಿದರೆ ಪೊಲೀಸರು ಚಡ್ಡಿಯಲ್ಲಿ ನಿಲ್ಲಿಸಿ ಪೊಟೋ ತೆಗೆಯಲಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಫಾರೂಕು ಪೆರ್ನೆ, ಜೋಕಿಂ ಡಿಸೋಜಾ, ನಾಸಿರ್ ಕೋಲ್ಪೆ, ಎಸ್ ಟಿ ಘಟಕದ ಮಹಾಲಿಂಗ ನಾಯ್ಕ, ದಾಮೋದರ ಮುರ,ಮೋಹನ್ ಗುರ್ಜಿನಡ್ಕ ಹಿಂದುಳಿದ ವರ್ಗ, ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರಸಾದ್ ಪಾಣಾಜೆ, ಸಾಬಾ ಕಬಕ,ಕೇಶವ ಪೂಜಾರಿ ಅರ್ಕ, ರಮನಾಥ ವಿಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here