ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದಿಂದ “ಪಾಟ್ಲಕ್” ಕಾರ್ಯಾಗಾರ

0

ಪುತ್ತೂರು: ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗವು “ಪಾಟ್ಲಕ್” ಎಂಬ ಕಾರ್ಯಾಗಾರ ನಡೆಯಿತು. ಗಯಾ ಕೆಫೆಯ ಪ್ರಸಿದ್ಧ ಪಾಕಶಾಲೆಯ ತಜ್ಞ ಶೆಫ್ ಪ್ರಜ್ವಲ್ ಡಿ’ಸೋಜ ನೇತೃತ್ವ ವಹಿಸಿದ್ದರು. ಆಹಾರ ಕ್ಯಾನ್ವಾಸ್, ಆಹಾರ ಅಲಂಕಾರ ತಂತ್ರಗಳು ಮತ್ತು ಆಹಾರದ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ಬಣ್ಣಗಳ ಪಾತ್ರದ ಕುರಿತು ಮಾಹಿತಿ ನೀಡಿದರು.ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ರಕ್ಷಣ್ ಟಿ. ಆರ್, ವಿಭಾಗದ ಮುಖ್ಯಸ್ಥ ಅವಿನಾಶ್ ಕೆ.ಆರ್ ಮತ್ತು ಅಧ್ಯಾಪಕ ದರ್ಶನ್ ಮತ್ತು ಶೃತ ಅವರ ಉಪಸ್ಥಿತರಿದ್ದರು.

ಮೋನಿಶ್ ಮತ್ತು ಚಂದನ್ ಅವರ ಪ್ರಾರ್ಥಿಸಿದರು.ರಶ್ವಿನ್ ಸ್ವಾಗತಿಸಿದರು. ಮೊಹಮ್ಮದ್ ಶಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೃತಿಕ್ ಹರೀಶ್ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here