ಚಾರ್ವಾಕ ಬ್ರಹ್ಮಬೈದೇರ್ಕಳ ಗರಡಿ ಕ್ಷೇತ್ರ ಕೋರಿಯಾನ ಗರಡಿ, ಪರಿವಾರ ದೈವಗಳ ಜೀರ್ಣೋದ್ಧಾರಕ್ಕೆ ತಾ|ಬಿಲ್ಲವ ಸಂಘಕ್ಕೆ ಮನವಿ

0

ಪುತ್ತೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬ್ರಹ್ಮಬೈದೇರ್ಕಳ ಗರಡಿ ಕ್ಷೇತ್ರ ಕೋರಿಯಾನ ಗರಡಿ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರದ ಸಲುವಾಗಿ ಕುಮಾರಧಾರ ಫಾರ್ಮ್ಸ್ ನಲ್ಲಿ  ಗರಡಿಯ ಜೀರ್ಣೋದ್ಧಾರ ಅಧ್ಯಕ್ಷರಾದ ವಿಜಯಕುಮಾರ್ ಸೊರಕೆರವರ ನೇತೃತ್ವದಲ್ಲಿ ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪುರವರಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಗರಡಿ ಟ್ರಸ್ಟ್ ನ ಉಪಾಧ್ಯಕ್ಷ ವಸಂತ ದಲಾರಿ, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ವಲಯ ಸಂಚಾಲಕ ಸಂತೋಷ್ ಕುಮಾರ್ ಮರಕ್ಕಡ, ತೇಜಸ್ ವಿ.ಸೊರಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here