ಬಡಗನ್ನೂರು ನಿಡ್ಪಳ್ಳಿ- ಪುತ್ತೂರು ವಲಯದ ಕರಾಡ ಬ್ರಾಹ್ಮಣ ಸೇವಾ ಸಮಿತಿ ಹಾಗೂ ಸೇವಾ ಟ್ರಸ್ಟ್ ಅವರ ನೇತೃತ್ವದಲ್ಲಿ, ಸಮಾಜದ ಕಟ್ಟಡ ‘ದುರ್ಗಾ ಗಣೇಶ ಸಭಾಭವನ’ದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನೆರವೇರಿತು.

ಪೈರುಪುಣಿ ವೆಂಕಟೇಶ ಭಟ್, ಖಂಡೇರಿ ಬಾಲಕೃಷ್ಣ ಭಟ್, ಪಂಜ ಗಣೇಶ ಭಟ್ಟರ ಹಾಗೂ ಮುಂಗಿಲ ವೆಂಕಟೇಶ ಭಟ್ ರವರ ನೇತೃತ್ವದಲ್ಲಿ, ಋಗುಪಾಕರ್ಮ ಕಾರ್ಯಗಳು ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬೀರಮೂಲೆ ಕೃಷ್ಣ ಭಟ್, ಕಾರ್ಯದರ್ಶಿ ರಾಮಕೃಷ್ಣ ಭಟ್ ಸಿ.ಯಚ್, ಕೋಶಾಧಿಕಾರಿ ವಿಷ್ಯ ಭಟ್ ಕೆ.ಎಮ್, ಹಾಗೂ ಸಮಿತಿ ಸದಸ್ಯರು ಸಮಾಜ ಬಾಂಧವರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.