ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ ಪ್ರಕರಣ-ಆರೋಪಿಗಳಿಗೆ ಜಾಮೀನು ಮಂಜೂರು

0

ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಪರ್ಲಡ್ಕದಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು, ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಆರೋಪಿಗಳ ಪರವಾಗಿ ಕಡಬದ ನ್ಯಾಯವಾದಿಗಳಾದ ಮುಸ್ತಫಾ ಎಂ ಹಾಗೂ ಇಸ್ಮಾಯಿಲ್ ಎನ್ ವಾದಿಸಿದ್ದರು. ಪುತ್ತೂರು-ಸಂಪ್ಯ ಕಡೆಯಿಂದ ಬೈಪಾಸ್ ರಸ್ತೆಯಲ್ಲಿ ಪಿಕಪ್ ವಾಹನವೊಂದರಲ್ಲಿ ದನವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನಾದರಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಪರ್ಲಡ್ಕದಲ್ಲಿ ಪಿಕಪ್ ವಾಹನ(ಕೆಎ.21-ಎ.9877)ವನ್ನು ನಿಲ್ಲಿಸಿ ನೋಡಿದಾಗ ಅದರೊಳಗಡೆ ದನವನ್ನು ಕಟ್ಟಿ ಹಾಕಿದ್ದು ಕಂಡು ಬಂದಿತ್ತು. ದನ ಸಾಗಾಟಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ. ಸದ್ರಿ ದನವನ್ನು ತಿಂಗಳಾಡಿ ಗಟ್ಟಮನೆ ಎಂಬಲ್ಲಿಯ ಪೂವಪ್ಪ ಎಂಬವರಿಂದ 17 ಸಾವಿರ ರೂ.ಗಳಿಗೆ ಖರೀದಿಸಿ ಕೆದಿಲದ ಮನೆಯೊಂದರಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ಪಿಕಪ್ ಚಾಲಕ ಮಾಹಿತಿ ನೀಡಿದ್ದು ದನವನ್ನು ರಕ್ಷಣೆ ಮಾಡಿರುವ ಪೊಲೀಸರು ಅಬ್ದುಲ್ ಕರೀಂ ಕೆದಿಲ(38ವ.), ಅಬ್ದುಲ್ ಜಮೀರ್ ಕೆದಿಲ(27ವ.) ಮತ್ತು ಪೂವಪ್ಪ ಎಂಬವರ ವಿರುದ್ದ ಕಲಂ 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 66 ಜೊತೆಗೆ 192(ಎ)ಐಎಂವಿ ಕಾಯ್ದೆಯಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here