ವಿದ್ಯಾಭಾರತಿ ವಿಭಾಗಮಟ್ಟದ ಕ್ರೀಡಾಕೂಟ :ರಾಮಕುಂಜ ಆಂಗ್ಲಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

0

ರಾಮಕುಂಜ: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನ ಚೆನ್ನನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಅ.3ರಿಂದ 7ರ ತನಕ ನಡೆದ ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ -ಬಾಲಕಿಯರ ಅಥ್ಲೆಟಿಕ್ ಸ್ಪರ್ಧೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.


14ರ ವಯೋಮಾನದ ಬಾಲಕರ ವಿಭಾಗದಲ್ಲಿ ಮೋಕ್ಷಿತ್ ಆರ್ ಗೌಡ (ಎತ್ತರ ಜಿಗಿತ- ದ್ವಿತೀಯ, ಉದ್ದ ಜಿಗಿತ- ದ್ವಿತೀಯ), ತೇಜಸ್ (600 ಮೀಟರ್ ಓಟ -ದ್ವಿತೀಯ), ತನುಷ್ ಬಿ.ಎಂ (ಎತ್ತರ ಜಿಗಿತ -ತೃತೀಯ), ಬಾಲಕಿಯರ ವಿಭಾಗದಲ್ಲಿ ಭುವನ (ಎತ್ತರ ಜಿಗಿತ -ಪ್ರಥಮ), ಅಭಿಜ್ಞಾ (80 ಮೀಟರ್ ಹರ್ಡಲ್ಸ್- ದ್ವಿತೀಯ) ಪ್ರಶಸ್ತಿ ಪಡೆದುಕೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಿರಣ್ (ಈಟಿ ಎಸೆತ- ಪ್ರಥಮ, ಗುಂಡೆಸೆತ- ಪ್ರಥಮ, ತ್ರಿವಿಧ ಜಿಗಿತ- ದ್ವಿತೀಯ), ರೋಹನ್ ಎಸ್ ಗೌಡ (5 ಕಿ.ಮೀ ನಡಿಗೆ ಸ್ಪರ್ಧೆ -ಪ್ರಥಮ), ಗಗನ್ ಎಂ.(ಎತ್ತರ ಜಿಗಿತ -ತೃತೀಯ), ವೇದಾಂತ್ (5 ಕಿ.ಮೀ ನಡಿಗೆ- ದ್ವಿತೀಯ), ಕಿಶೋರ್ ಡಿ.ಕೆ(ಕೋಲ್ಜಿಗಿತ-ಪ್ರಥಮ), ತೇಜಸ್ ಗೌಡ (ಕೋಲ್ಜಿಗಿತ-ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಶಾರ್ವರಿ ಕೆ ರೈ(ಹ್ಯಾಮರ್ ತ್ರೋ -ಪ್ರಥಮ), ನಮೃತ (3 ಕಿ.ಮೀ ನಡಿಗೆ -ದ್ವಿತೀಯ) ಪ್ರಶಸ್ತಿ ಪಡೆದುಕೊಂಡಿದ್ದಾರೆ.‌


ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮಾ ಬಿ., ದಿವ್ಯ ಪಿ.ಎನ್., ರಾಘವ, ಕಿಶನ್ ತರಬೇತಿ ನೀಡಿದ್ದರು. ಸಂಸ್ಥೆಯ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿಯರು, ಶಿಕ್ಷಕ ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

12 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಾಲೆಯ ಬಾಲಕರ ತಂಡ ಪ್ರಥಮ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಶಾಲೆಯ 12 ವಿದ್ಯಾರ್ಥಿಗಳು ಅ.31ರಿಂದ ನ.4ರ ತನಕ ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಿರಣ್ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here