





ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ದೀಪಾವಳಿ ಸಂಭ್ರಮ ಕಾರ್ಯಕ್ರಮ ಅ.28 ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಆಚರಿಸಲಾಯಿತು. ಸದಸ್ಯರು ದೀಪಗಳನ್ನು ಉರಿಸಿ ಸಂಭ್ರಮಿಸಿದರು.


ಮುಖ್ಯ ಅತಿಥಿ ಸಾಹಿತಿ ಹಾಗೂ ಶಿಕ್ಷಕ ಲಯನ್ ಜಯಾನಂದ ಪೆರಾಜೆ ದೀಪಾವಳಿಯ ಬಗ್ಗೆ ಉಪನ್ಯಾಸ ನೀಡಿದರು. ಲಯನ್ಸ್ ಅಧ್ಯಕ್ಷ ಲಯನ್ ಪ್ರೇಮಲತ ರಾವ್ ಸ್ವಾಗತಿಸಿದರು. ಲಯನ್ ಸುಧಾಕರ್ ವಂದಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಲಯನ್ ಅರವಿಂದ ಭಗವಾನ್, ಪಿ ಆರ್ ಓ ಲಯನ್ ಸುದರ್ಶನ ಪಡಿಯಾರ ಉಪಸ್ಥಿತರಿದ್ದರು. ಲಯನ್ ವಿಶ್ವನಾಥ ಗೌಡ, ಲಯನ್ ತ್ರಿವೇಣಿ ಪೇರೋಡಿ ಲಯನ್ ಸದಾನಂದ ಶೆಟ್ಟಿ ಕಾರ್ಯಕ್ರಮದಲ್ಲಿ ಸಹಕರಿಸಿದರು.















