





ಪುತ್ತೂರು : ಇಂಪ್ಯಾಕ್ಟ್ ಆರ್ಟ್ ಮತ್ತು ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇವರ ವತಿಯಿಂದ ಸುಳ್ಯದ ಕುರುಂಜಿ ಜಾನಕಿ ಸಭಾ ಭವನದಲ್ಲಿ ನ.23ರಂದು ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ಶಾಲೆಯ 8ನೇ ತರಗತಿಯ ಆತ್ಮಿ ಇವರು ಕಟಾ ಮತ್ತು ಕುಮಿಟೆ ಎರಡೂ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.ಇವರು ಮುಂಡೂರು ಕನ್ನರ್ ನೂಜಿ ನಿವಾಸಿ ರಮೇಶ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾಗಿರುತ್ತಾರೆ.











