




ಪುತ್ತೂರು: ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಡಿ.2ರಂದು ಸಂಜೆ 5.30ರಿಂದ ಈ ವರ್ಷದ ನೂತನ ಕಲಾಕಾಣಿಕೆ ವರ್ಣಪಲ್ಲಟ ಯಕ್ಷಗಾನ ಬಯಲಾಟ ನಡೆಯಲಿದೆ.



ಶ್ರೀವಾಸುದೇವ ರಂಗಾಭಟ್ ಮಧೂರು ಕಥಾಸಂಯೋಜನೆಯಲ್ಲಿ ಶ್ರೀಪ್ರಸಾದ್ ಮೊಗಬೆಟ್ಟು ಪದ್ಯರಚನೆಯ ನೂತನ ಪ್ರಸಂಗ ವರ್ಣಪಲ್ಲಟ ಈ ವರ್ಷದ ತಿರುಗಾಟದ ನೂತನ ಪ್ರಸಂಗವಾಗಿದೆ ಎಂದು ಮೇಳದ ಪ್ರಬಂಧಕರಾದ ಹರೀಶ್ ಬಳಂತಿಮುಗರು ತಿಳಿಸಿದ್ದಾರೆ.















