




ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಡಿ. 14,15ರಂದು ಧಾರ್ಮಿಕ ಕಾರ್ಯಕ್ರಮ, ಪಜ್ಜಡ್ಕ ಕಲ್ಕುಡ ದೈವಸ್ಥಾನದ ಸಮೀಪ ಕಾಲಾವಧಿಯ ಬುಡೇರಿಯಾ ಶ್ರೀ ಶಿರಾಡಿ ದೈವದ ನೇಮೋತ್ಸವ ನಡೆಯಿತು.




ಡಿ.10 ರಂದು ತೋಟಂತಿಲ ಶ್ರೀ ಅನಂತರಾಮ ಭಟ್ ಇವರಿಂದ ಪಜ್ಜಡ್ಕದಲ್ಲಿ ನಾಗತಂಬಿಲ ಶ್ರೀ ರಕ್ತೇಶ್ವರಿ ದೈವಕ್ಕೆ ತಂಬಿಲ ನಡೆದು, ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ ನಡೆಯಿತು.





ಡಿ.14 ರಂದು ಬ್ರಹ್ಮಶ್ರೀ ವೇ.ಮೂ ತಂತ್ರಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಗಣಹೋಮ, ದೈವಗಳಿಗೆ ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೆದಿಲದಲ್ಲಿ ಶ್ರೀ ಶಿರಾಡಿ ದೈವದ ಭಂಡಾರ ತೆಗೆದು ಅದೇ ಸಮಯಕ್ಕೆ ನೇಮೋತ್ಸವದ ಸ್ಥಳ ಕಲ್ಕುಡ, ಕಲುರ್ಟಿ ದೈವಸ್ಥಾನದಲ್ಲಿ ಕಲ್ಕುಡ, ಕಲ್ಲುರ್ಟಿ, ದೈವಗಳ ಭಂಡಾರ ತೆಗೆದು ಅನ್ನಪ್ರಸಾದ ನಡೆದ ಬಳಿಕ ಕಲ್ಕುಡ, ಕಲ್ಲುರ್ಟಿ, ಚಾಮುಂಡಿ ಹಾಗೂ ಆಲಿ ದೈವಗಳ ನೇಮೋತ್ಸವ ನಡೆಯಿತು.

ಡಿ.15 ರಂದು ಬೆಳಿಗ್ಗೆ ಶ್ರೀ ಶಿರಾಡಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆದು ಭಕ್ತಾಧಿಗಳಿಂದ ಹರಕೆ, ಕೈಕಾಣಿಕೆ ಒಪ್ಪಿಸಿದ ನಂತರ ಅನ್ನಪ್ರಸಾದ ನಡೆದು ಬಲಿಯೊಂದಿಗೆ ಗಡಿ ಜಾಗಕ್ಕೆ ದೈವಗಳ ಪ್ರಯಾಣ ನಡೆಯಿತು. ಅಗಮಿಸಿದ ಸಾವಿರಾರು ಭಕ್ತಾಧಿಗಳು ದೈವಗಳ ಶ್ರೀಮುಡಿ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸ ಮಜಲು ರವರು ಸೇರಿದಂತೆ ಕಾರ್ಯಕರ್ತರು ನೇಮೊತ್ಸವ ಕಾರ್ಯಕ್ರಮದಲ್ಲಿ ಸಹಕರಿಸಿದರು.








