ಮರೋಡಿ: ಯಕ್ಷ ಬಳಗ ಬೆಳ್ತಂಗಡಿ ಆಶ್ರಯದಲ್ಲಿ ಯಕ್ಷ ಬಳಗ ಮರೋಡಿ ಸಮಿತಿಯ ಸಹಕಾರದೊಂದಿಗೆ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಮರೋಡಿ ಪೊಸರಡ್ಕ ಬಳಿ ನ. 30 ರಂದು ನಡೆಯುವ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮರೋಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನ .20 ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರು ವಲಯ ಸಮಿತಿಯ ಗೌರವ ಅಧ್ಯಕ್ಷರಾದ ಪಿ.ಕೆ ರಾಜು ಪೂಜಾರಿ ಯವರು,ಸಲಹೆಗಾರರಾದ ಸತೀಶ್ ಕಾಶಿಪಟ್ನ ,ಅಧ್ಯಕ್ಷರಾದ ಮುನಿರಾಜ್ ಜೈನ್ ,ಕಾರ್ಯದ್ಯಕ್ಷರಾದ ನಾರಾಯಣ ಪೂಜಾರಿ ಉಚ್ಚೂರು ,ಕಾರ್ಯದರ್ಶಿ ಯೋಗೇಂದ್ರ ಆಚಾರ್ಯ ,ಕೋಶಾದಿಕಾರಿ ಎನ್ ದಿವಾಕರ ಭಂಡಾರಿ ನಾರವಿ.ಸಲಹೆಗಾರರು ಸೂರ್ಯನಾರಾಯಣ ಡಿ ಕೆ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.