ಮಂಗಳೂರು ವರ್ಲ್ಡ್ ಬಂಟ್ ಫೌಂಡೇಷನ್ ಟ್ರಸ್ಟ್‌ನಿಂದ ಒಳಮೊಗ್ರು ಗ್ರಾಮದ ಪರಮೇಶ್ವರಿಯವರಿಗೆ ಮನೆ ಹಸ್ತಾಂತರ

0

ಪುತ್ತೂರು: ವರ್ಲ್ಡ್ ಬಂಟ್ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಆಲ್ ಕಾರ್ಗೊ ಸಂಸ್ಥೆಯ ಶಶಿಕಿರಣ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ (ಸಿಎಸ್‌ಆರ್ ಫಂಡ್) ಪುತ್ತೂರು ತಾಲೂಕು ಬಂಟರ ಸಂಘದ 2020-21 ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಬೂಡಿಯಾರು ರಾಧಾಕೃಷ್ಣ ರೈಯವರ ಮನವಿ ಮತ್ತು ಶಿಫಾರಸ್ಸಿನ ಮೇರೆಗೆ ಸುಮಾರು 6 ರಿಂದ 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಒಳಮೊಗ್ರು ಗ್ರಾಮದ ಪರಮೇಶ್ವರಿ ಕೋಂ ಬಿ.ಬಾಲಕೃಷ್ಣ ರೈಯವರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ಪ್ರಮುಖರಾದ ಸವಣೂರು ಕೆ.ಸೀತಾರಾಮ ರೈ, ಅರಿಯಡ್ಕ ಚಿಕ್ಕಪ್ಪ ನಾಕ್, ಮೋಹನ್ ರೈ ನರಿಮೊಗರು, ಜಗಜೀವನ್‌ದಾಸ ರೈ ಚಿಲ್ಮೆತ್ತಾರು, ರಾಕೇಶ್ ರೈ ಕೆಡೆಂಜಿ, ಎನ್.ಚಂದ್ರಹಾಸ ಶೆಟ್ಟಿ, ಒಳಮೊಗ್ರು ಗ್ರಾಮದ ಬಂಟರ ಸಂಘದ ಅಧ್ಯಕ್ಷ ಬಾರಿಕೆ ನಾರಾಯಣ ರೈ, ಕಾರ್ಯದರ್ಶಿ ಮಿತ್ರದಾಸ ರೈ ಡೆಕ್ಕಳ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಶ್ರೀಧರ ರೈ ಹೊಸಮನೆ, ಜೈರಾಜ್ ಭಂಡಾರಿ ಡಿಂಬ್ರಿ, ಅಮ್ಮಣ್ಣ ರೈ ದೇರ್ಲ, ತಾಲೂಕು ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಜೇಶ್ ರೈ ಪರ್ಪುಂಜ, ಅನಿಲ್ ಬಾರಿಕೆ, ಸುಧಾಕರ ಆಳ್ವ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here