ಪುತ್ತೂರು: ಪುರಾತನ ಐತಿಹ್ಯ ಇರುವ ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ನಡೆಯಲಿರುವ ಶ್ರೀಮಹಾಲಕ್ಷ್ಮೀ ದೇವರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಜ.19ರಂದು ಸಂಜೆ ಹಸಿರುವಾಣಿ ಮೆರವಣಿಗೆ ನಡೆಯಿತು.
ಸಂಜೆ ಶ್ರೀ ಶಿವಪಾರ್ವತಿ ಮಂದಿರದಲ್ಲಿ ಪ್ರಾರ್ಥನೆ ಮಾಡಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹಿರಿಯರಾದ ಶೇಷಪ್ಪ ಪೂಜಾರಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಅವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಶಿವಪಾರ್ವತಿ ಮಂದಿರದಿಂದ ಶ್ರೀ ಮಹಾಲಕ್ಷ್ಮಿ ಮಂದಿರ ತನಕ ತರಕಾರಿ, ಅಕ್ಕಿ, ಸೀಯಾಳ ಸೇರಿದಂತೆ ಇತರ ಫಲವಸ್ತುಗಳನ್ನು ಭಕ್ತರು ವಾಹನದ ಮೂಲಕ ಮಹಾಲಕ್ಷ್ಮೀ ಮಂದಿರದ ಆವರಣಕ್ಕೆ ತಂದು ಪ್ರಾರ್ಥನೆ ಮಾಡಿ ಬ್ರಹ್ಮಕಲಶೋತ್ಸವ ಉಗ್ರಾಣಕ್ಕೆ ಒಪ್ಪಿಸಿದರು.