ವಿಟ್ಲ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಯು. ಎಸ್. ಎ. ತರಬೇತಿಗೆ ಆಯ್ಕೆಗೊಂಡ ಎಂ. ಡಿ. ಆರ್. ಟಿ. ಸಾಧಕ ಪ್ರತಿನಿಧಿಗಳನ್ನು ಉಡುಪಿ ಎಸಿ ವಿಭಾಗೀಯ ಅಧಿಕಾರಿ ಬಿಂದು ರಾಬಟ್ ಸನ್ಮಾನಿಸಿದರು.
ಮಾರುಕಟ್ಟೆ ವ್ಯವಸ್ಥಾಪಕ ರಮೇಶ ಭಟ್, ಶಾಖಾಧಿಕಾರಿ ಪಿ.ಸಿ.ನಾಯಕ್, ಉಪ ಶಾಖಾಧಿಕಾರಿ ಸುಂದರ ಮೇರ, ಬೆಳ್ತಂಗಡಿ ಸಂಪರ್ಕ ಶಾಖಾಧಿಕಾರಿ ದೇವಪ್ಪ ನಾಯ್ಕ, ಅಧಿಕಾರಿಗಳಾದ ಜಯದೇವ್, ಮಧ್ವರಾಜ್ ಬಿ.ಕಲ್ಮಾಡಿ, ಟಿ.ಡಿ.ರಾಘವೇಂದ್ರ, ಸತೀಶ ಕುಮಾರ್, ದಿನೇಶ ಮಾಮೇಶ್ವರ, ನಾರಾಯಣ ಬಲ್ಯ ಮೊದಲಾದವರು ಉಪಸ್ಥಿತರಿದ್ದರು.