- ತೆರವುಗೊಳಿಸುವಂತೆ ಕೆದಂಬಾಡಿ ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿ ಮನವಿ
ಪುತ್ತೂರು: ಕೆದಂಬಾಡಿ ಗ್ರಾಮದ ಕೆದಂಬಾಡಿ ಪಡಿತರ ಸಾಮಾಗ್ರಿ ವಿತರಣಾ ಕೇಂದ್ರದ ಆವರಣದಲ್ಲಿ ರಾಜಕೀಯ ಪ್ರೇರಿತ ಬ್ಯಾನರ್ ಅಳವಡಿಸಿದ್ದು ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕೆದಂಬಾಡಿ ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿಯು ಕೆದಂಬಾಡಿ ಕೆಯ್ಯೂರು ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ದೇರ್ಲರವರಿಗೆ ಜ.೨೧ ರಂದು ಮನವಿ ಸಲ್ಲಿಸಿತು. ಬ್ಯಾನರ್ನಲ್ಲಿ ರಾಜಕೀಯ ಪಕ್ಷವೊಂದರ ನಾಯಕರುಗಳ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಹಾಕಲಾಗಿದ್ದು ಇಂತಹ ಬ್ಯಾನರ್ ಅನ್ನು ಪಡಿತರ ಸಾಮಾಗ್ರಿ ವಿತರಣಾ ಕೇಂದ್ರದ ಆವರಣದಲ್ಲಿ ಅಳವಡಿಸಿದ್ದು ಸರಿಯಲ್ಲ ಇದನ್ನು ಕೂಡಲೇ ತೆರವು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈ, ಕಾರ್ಯದರ್ಶಿ, ಕೆಯ್ಯೂರು ಗ್ರಾಪಂ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಕೆಯ್ಯೂರು ಗ್ರಾಪಂ ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ ದೇರ್ಲ, ಅಸಂಘಟಿತ ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಕೆದಂಬಾಡಿ ೩ ನೇ ಬೂತ್ ಸಮಿತಿ ಅಧ್ಯಕ್ಷ ಸಿ. ರಘುನಾಥ ರೈ, ೪ ನೇ ವಾರ್ಡ್ ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು, ಪುತ್ತೂರು ಬ್ಲಾಕ್ ಉಪಾಧ್ಯಕ್ಷ ಮನೋಹರ ರೈ ಎಂಡೆಸಾಗು ಉಪಸ್ಥಿತರಿದ್ದರು. ಮನವಿ ಸಲ್ಲಿಸಿದ ಕೆಲ ಸಮಯದಲ್ಲೆ ಬ್ಯಾನರ್ ಅನ್ನು ಸಹಕಾರಿ ಸಂಘದವರು ಆವರಣದಿಂದ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರ: ಮನವಿ