ವಿಶ್ವ ಹಿಂದೂ ಪರಿಷದ್ ಬಜರಂಗದಳ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ರವರು ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿ ಮೈಸೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಸುಳ್ಯ ವಿ.ಹೆಚ್.ಪಿ. ಬಜರಂಗದಳ
ಪ್ರಖಂಡದ ಕಾರ್ಯಕರ್ತರನ್ನು ಅ.15 ರಂದು ಭೇಟಿ ಮಾಡಿದರು.
ಪುರೋಹಿತ ನಾಗರಾಜ್ ಭಟ್ ರವರ ಹಳೆಗೇಟು ಕೇಶವ ಕೃಪಾದಲ್ಲಿ ಅವರನ್ನು ಪ್ರಖಂಡದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಗುಜರಾತ್ ರಾಜಕೋಟ್ ಮಠದ ಪರಮಾನಂದ ಸ್ವಾಮೀಜಿ ಹಾಗೂ ರಾಷ್ಟ್ರೀಯ ಸಹ ಕಾರ್ಯದರ್ಶಿ ಕೋಟೇಶ್ವರ ಶರ್ಮಾ ,ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಗಡೆ, ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಜತೆಯಲ್ಲಿದ್ದರು. ವಿ.ಹೆಚ್.ಪಿ.ಬಜರಂಗದಳ
ಸುಳ್ಯ ಪ್ರಖಂಡದ ಕಾರ್ಯಕರ್ತರು, ದುರ್ಗಾವಾಹಿನಿಯ ಸದಸ್ಯರು ಉಪಸ್ಥಿತರಿದ್ದರು.
1