ಪುತ್ತೂರು: ಪುತ್ತೂರು ಗ್ರಾಮಾಂತರ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಫಲಾನುಭವಿಗಳ ಕಾರ್ಯಾಗಾರ ಹಾಗೂ ಉಚಿತ ವೈದ್ಯಕೀಯ ಶಿಬಿರವನ್ನು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಸಲಾಯಿತು.
ಫಲಾನುಭವಿಗಳ ಕಾರ್ಯಾಗಾರವನ್ನು ಪುತ್ತೂರುಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿಯವರ ಅಧ್ಯಕ್ಷತೆ ಯೊಂದಿಗೆ ಕಾರ್ಯಕ್ರಮ ವನ್ನು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿ ಮನೆಯವರು ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚಾ ದ ಕೋಶಾಧಿಕಾರಿ ಪ್ರೇಮಲತಾ ರಾವ್ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ವಿವರಿಸಿದರು. ಮಹಿಳಾ ಮೋರ್ಚಾ ದ ಪ್ರಭಾರಿಗಳಾದ ಉಷಾ ಮುಳಿಯ ಸದಸ್ಯರು ಗಳ ಜೊತೆ ಸಂವಾದ ನಡೆಸಿದರು. ಮಲ್ಲಿಕಾ ಹಾಗು ಅರ್ಚನ ಪ್ರಾರ್ಥಿಸಿದರು.ನಾಗವೇಣಿ ಸ್ವಾಗತಿಸಿದರು, ಚಂದ್ರಕಲಾ ವಂದಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು.