ಸುಳ್ಯ ಜ್ಯೋತಿ ವೃತ್ತದ ಬಳಿ ಇರುವ ಲಾಲ್ ಬಹದ್ದೂರ್ ಶಾಸ್ತ್ರಿ ಆಟೋ ನಿಲ್ದಾಣದ ಮೇಲ್ಚಾವಣಿಗೆ ಮರದ ಗೆಲ್ಲು ಮುರಿದು ಬಿದ್ದು ನಿಲ್ದಾಣದ ಮೇಲ್ಚಾವಣಿಗೆ ಹಾನಿ ಉಂಟಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಈ ಘಟನೆ ಉಂಟಾಗಿದ್ದು ಹೆಚ್ಚಿನ ಅನಾಹುತ ತಪ್ಪಿದೆ.
ಅಮೃತ ಭವನ ಕಟ್ಟಡದ ಬಳಿ ಇರುವ ಬೃಹತ್ ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು ಇಲ್ಲಿ ಪಕ್ಕದಲ್ಲಿ ವಿದ್ಯುತ್ ಲೈನುಗಳು ಹಾದು ಹೋಗಿದೆ. ಮುಂದಿನ ದಿನಗಳಲ್ಲಿ ಅಪಾಯವನ್ನು ತಂದೊಡ್ಡುವ ಮುನ್ನ ಮರದ ಗೆಲ್ಲನ್ನು ತೆರೆವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.