ನೆಲ್ಯಾಡಿ : ವಿದ್ಯಾರ್ಥಿ ಜೀವನದಲ್ಲಿ ಗುರಿ ಹಾಗೂ ಸಾಧಿಸುವ ಛಲ ಇರಬೇಕು ಆಗ ಯಶಸ್ಸು ಖಂಡಿತ ಎಂದು ವೆ| ರೆ| ಸ್ಕರಿಯಾ ರಂಬಾನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅದೇ ರೀತಿ ಶಿಕ್ಷಕರು ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯ ಬಗ್ಗೆ ಯೂ ಶ್ಲಾಘಿಸಿ ಮಾತನಾಡಿದರು. ಅವರು ಜ್ಞಾನೋದಯ ಬೆಥನಿ ಪಿ.ಯು.ಕಾಲೇಜು ರ್ನೆಲ್ಯಾಡಿಯಲ್ಲಿ, ನಡೆದ ಸೇವೆಯಿಂದ ನಿರ್ಗಮಿಸುತ್ತಿರುವ ಶಿಕ್ಷಕರಿಗೆ ವಿದಾಯ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿ ವಹಿಸಿದ್ದರು. ವೇದಿಕೆಯಲ್ಲಿ ಸಾಪಿಯೆನ್ಶಿಯಾ ಬೆಥನಿ ಫಸ್ಟ್ ಗ್ರೇಡ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೆ|ಫಾ| ಜಿಜನ್ ಅಬ್ರಹಾಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ, ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲರಾದ ಜೋಸ್ ಎಂ. ಜೆ. ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲರಾದ ಸುಶಿಲ್ ಕುಮಾರ್, ಹೈಸ್ಕೂಲ್ ವಿಭಾಗದ ಮುಖ್ಯ ಗುರುಗಳಾದ ಜೋರ್ಜ್ ಕೆ ತೋಮಸ್ , ಪ್ರೈಮರಿ ವಿಭಾಗದ ಮುಖ್ಯ ಗುರುಗಳಾದ ಜೋಸ್ ಪ್ರಕಾಶ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯಿಂದ ಸೇವಾ ನಿವೃತ್ತಿ ಪಡೆದು ವಿದಾಯಗಳ್ಳುತ್ತಿರುವ ಶಿಕ್ಷಕರಾದ ವೀಣಾ ಹಾಗೂ ಜೆಸಸಿಯಮ್ಮರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಮುಂದಿನ ಜೀವನ ಸಂತೋಷದಾಯಕವಾಗಿರಲಿ ಎಂದು ಶುಭ ಹಾರೈಸಿದರು.
ಅದೇ ರೀತಿ ಆಯ್ಕೆಯಾದ ಪ್ರತಿ ತರಗತಿಯ ಸಾಧಕರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರಾಂಶುಪಾಲರ ವಿಶೇಷ ಪುರಸ್ಕಾರಕ್ಕೆ ಅರ್ಹರಾದ ಉತ್ತಮ ನಾಯಕತ್ವ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಶೆರ್ವಿನ್ ಶಾಜಿಯವರಿಗೂ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೈನಾಬ್ ಫಿದಾ ಸ್ವಾಗತಿಸಿ ಮೋನಿಷಾ ವಂದಿಸಿದರು. ಕ್ರಿಸ್ಮಾರವರು ಕಾರ್ಯಕ್ರಮ ನಿರೂಪಿಸದರು. ಶಿಕ್ಷಕಿ ಎಲಿಸಬೆತ್ ವಿದಾಯಗೊಳ್ಳುತ್ತಿರುವ ಶಿಕ್ಷಕರನ್ನು ಪರಿಚಯಿಸಿದರು. ಬಹುಮಾನವಿತರಣಾ ಕಾರ್ಯಕ್ರಮದ ನೇತೃತ್ವ ಶಿಕ್ಷಕಿ ಅಕ್ಷತಾ ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.