ನಾಲ್ಕೂರು ಗ್ರಾಮದ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಉಜಿರಡ್ಕ ಕಳೆದ ಹಲವು ವರ್ಷಗಳಿಂದ ದಿನನಿತ್ಯ ಪೂಜೆ ಸಂಕ್ರಾಂತಿ ಕಾಲದಲ್ಲಿ ಅಗೇಲು ಸೇವೆ ನಡೆಸಿಕೊಂಡು ಬರುತಿದ್ದು ಮೊನ್ನೆ ದಿನ ಕಾರಣಿಕ ಘಟನೆ ನಡೆದಿರುವುದು ವರದಿಯಾಗಿದೆ.
ಅದೇ ದಿನ ಉಜಿರಡ್ಕ ಸಾನಿಧ್ಯದಲ್ಲಿ ಸಂಜೆ ಪೂಜೆ ಒಳಗಾಗಿ ಕೊರಗಜ್ಜನ ಪವಾಡ ಎಂಬಂತೆ ಬಾಲಕಿಯು ಗೋವಾದಲ್ಲಿ ಪತ್ತೆಯಾಗಿದ್ದಳು. ಅದರಂತೆ ಅ. 30 ರಂದು ಬಾಲಕಿ ಹಾಗೂ ಕುಟುಂಬಸ್ಥರು ಉಜಿರಡ್ಕ ಸಾನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಾನಿಧ್ಯದ ಆಡಳಿತದ ಚಿನ್ನಮ್ಮ ಉಜಿರಡ್ಕ, ಸುರೇಶ್ ಉಜಿರಡ್ಕ ಹಾಗೂ ಚರಣ್ ರಾಜ್ ಉಜಿರಡ್ಕ ಮತ್ತಿತರರು ಉಪಸ್ಥಿತರಿದ್ದರು.