ಪುತ್ತೂರು : ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ ಅವಧಿ ಮೀರಿದ ಒಟ್ಟು 55 ಪೆಟ್ಟಿಗೆ 20 ಬಾಟಲ್ ಬೀರ್ ಹಾಗೂ 152 ಪೆಟ್ಟಿಗೆ 47 ಬಾಟಲ್ ಹಳೆಯ ವೈನ್ ದಾಸ್ತಾನುಗಳನ್ನು ಅಬಕಾರಿ ಉಪ ಆಯುಕ್ತ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಆದೇಶದಂತೆ, ಅಬಕಾರಿ ಉಪ ಅಧೀಕ್ಷಕರಾದ ಅಶೋಕ್ ಎ. ಪೂಜಾರಿ, ಅಬಕಾರಿ ನಿರೀಕ್ಷಕರಾದ ಸುಜಾತಾ ಎ., ಹಾಗೂ ಪಾನೀಯ ನಿಗಮದ ವ್ಯವಸ್ಥಾಪಕ ಎಸ್.ಜಿ. ಜಗದೀಶ್, ಮೇಲ್ವಿಚಾರಕ ಎಚ್ ಎಸ್.ಪಾಟೀಲ್ ಹಾಗೂ ಅಬಕಾರಿ ಪೇದೆ ಸಿದ್ದಲಿಂಗ, ಇವರ ಉಪಸ್ಥಿತಿಯಲ್ಲಿ ನಾಶಪಡಿಸಲಾಯಿತು.