ಪುತ್ತೂರು ಮುಖ್ಯರಸ್ತೆ ಕಲ್ಲಾರೆ ರಸ್ತೆ ಬದಿ ಅಪಾಯಕಾರಿ ಗುಂಡಿ ಮುಚ್ಚಿದ ನಗರಸಭೆ – ಜಲಸಿರಿ ಕಾಮಗಾರಿ ವೇಳೆ ತೆಗೆದ ಹೊಂಡಕ್ಕೆ ನಗರಸಭೆ ಮುಕ್ತಿ

0

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಕಲ್ಲಾರೆ ರಿಕ್ಷಾ ಪಾರ್ಕ್ ಬಳಿ ನೀರು ಸರಬರಾಜು ಪೈಪ್ ಒಡೆದು ಅಪಾಯಕಾರಿ ಹೊಂಡ ನಿರ್ಮಾಣವಾದ ಕುರಿತು ಸುದ್ದಿಯಲ್ಲಿ ಬಂದ ವರದಿಗೆ ನಗರಸಭೆ ತಕ್ಷಣ ಸ್ಪಂದಿಸಿ ಗುಂಡಿಯನ್ನು ಮುಚ್ಚುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿದೆ.

ಕಲ್ಲಾರೆಯ ಮುಖ್ಯರಸ್ತೆಯ ರಿಕ್ಷಾ ನಿಲ್ದಾಣದ ಬದಿಯಲ್ಲೇ ಅಪಾಯಕಾರಿ ಹೊಂಡ ಇರುವುದರಿಂದ ಇಲ್ಲಿ ಸಂಚರಿಸುವಾಗ ವಾಹನ, ಪಾದಚಾರಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ ಎಂಬ ಕುರಿತು ಸುದ್ದಿಯಲ್ಲಿ ವರದಿಯಾಗಿತ್ತು. ವರದಿಗೆ ಸ್ಪ‌ಂದಿಸಿದ ನಗರಸಭೆ ಗುಂಡಿಯನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ನೀಡಿದೆ.

 

ಜಲಸಿರಿ ಗುಂಡಿಗೆ ನಗರಸಭೆ ಮುಕ್ತಿ:
ಜಲಸಿರಿಯ ಯೋಜನೆಯಲ್ಲಿ ಪೈಪ್ ಅಳವಡಿಸುವ ಕಾರ್ಯ ನಡೆಯತ್ತಿದ್ದು ಹಲವು ಕಡೆ ತೆಗೆದ ಗುಂಡಿಗಳ ಮೇಲಿನ ಮಣ್ಣು ಸಡಿಲಗೊಂಡು ಹೊಂಡ ನಿರ್ಮಾಣ ಆಗುತ್ತಿದೆ. ಇದೀಗ ಗುಂಡಿಗೆ ಮುಕ್ತಿ ಕೊಡುವ ಕೆಲಸ ನಗರಸಭೆ ಮಾಡುತ್ತಿದೆ.

 

ಪುತ್ತೂರು ಮುಖ್ಯರಸ್ತೆ ಕಲ್ಲಾರೆ ರಸ್ತೆ ಬದಿ ಅಪಾಯಕಾರಿ ಹೊಂಡ

LEAVE A REPLY

Please enter your comment!
Please enter your name here