ನೆಲ್ಯಾಡಿ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲದಲ್ಲಿ ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ಎ.21ರಂದು ಬೆಳಿಗ್ಗೆ ನಡೆದಿದೆ.
ಕೊಯಿಲ ನೂಜಿಮಾರ್ ನಿವಾಸಿ ಮೋನಪ್ಪ ಎಂಬವರು ಕೊಯಿಲ ಹಾಲು ಸೊಸೈಟಿಗೆ ಹಾಲು ಹಾಕಿ ಕೊಯಿಲ ಗ್ರಾಮ ಪಂಚಾಯತ್ ಕಚೇರಿಯ ಕಡೆಗೆ ಹೋಗಲೆಂದು ಬಂದವರು ಕೊಯಿಲ ಜಂಕ್ಷನ್ನಲ್ಲಿ ತನ್ನ ಬೈಕ್ ತಿರುಗಿಸುತ್ತಿದ್ದಂತೆ ಹಿಂಬದಿಯಿಂದ ವೇಗವಾಗಿ ಬಂದ ಆಪಾಚಿ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಬೈಕ್ಗಳು ಪಲ್ಟಿಯಾಗಿದ್ದು ಆಪಾಚಿ ಬೈಕ್ ಪಕ್ಕದ ಚರಂಡಿಗೆ ಹೋಗಿ ಬಿದ್ದಿದೆ. ಘಟನೆಯಲ್ಲಿ ನೂಜಿಮಾರ್ ನಿವಾಸಿ ಮೋನಪ್ಪ ಹಾಗೂ ಅಪಾಚಿ ಬೈಕ್ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಇವರು ಮರ್ದಾಳ ನಿವಾಸಿಗಳೆಂದು ತಿಳಿದುಬಂದಿದೆ.