ಪುತ್ತೂರು; ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೆ.2 ಹಾಗೂ 3ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಎ.24 ರಂದು ಗೊನೆ ಮುಹೂರ್ತವು ನೆರವೇರಿತು.
ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ಬಳಿಯ ಚಂದಪ್ಪ ಪೂಜಾರಿಯವರ ತೋಟದಿಂದ ಗೊನೆ ಕಡಿಯಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಸದಸ್ಯರಾದ ಚಂದಪ್ಪ ಪೂಜಾರಿ, ವಿಶ್ವನಾಥ ಕುಲಾಲ್, ಶುಭಕರ ರಾವ್, ಮಹಾಲಿಂಗ ನಾಯ್ಕ, ನವೀನ್ ಕುಮಾರ್ ಜಿ.ಟಿ., ಲೀಲಾವತಿ, ಉಮಾವತಿ, ಅರ್ಚಕ ಸದಾನಂದ ರವಿ, ಕೇಶವ ಭಟ್, ಗ್ರಾಮಸ್ಥರಾದ ಮುರಳೀಧರ ಬೋರ್ಕರ್, ರಾಮ ನಾಯ್ಕ ಬಂಗಾರಡ್ಕ, ಮೋಕ್ಷಿತ್, ತಿಲಕ್, ಸುಬ್ಬಯ್ಯ, ಈಶ್ವರ ನಾಯ್ಕ ಎಂ.ಎಸ್. ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.