ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|ಮುರಲೀ ಮೋಹನ್ ಚೂಂತಾರುರವರು ಗೃಹರಕ್ಷಕದಳ ಪುತ್ತೂರು ಘಟಕಕ್ಕೆ ಭೇಟಿ ನೀಡಿ ಗೃಹರಕ್ಷಕರ ಕುಂದು ಕೊರತೆ ವಿಚಾರಿಸಿದರು. ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದ ಸಲಹುದ್ದಿನ್ ನೌಷದ್ರವರನ್ನು ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ವಿಚಾರಣೆಗೆ ಬರಲು ಆದೇಶ ನೀಡಲಾಯಿತು. ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಜಗನ್ನಾಥ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.