ಈಶ್ವರಮಂಗಲ: ಮೇನಾಲ ಕುಡ್ಚಿಲ ನಿವಾಸಿ, ಈಶ್ವರಮಂಗಲ ಮಂಡಲ ಪಂಚಾಯತ್ನ ಮಾಜಿ ಮಂಡಲ ಪ್ರಧಾನರಾದ ವಿಶ್ವನಾಥ ಶೆಟ್ಟಿ(88.)ರವರು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಮೋಕ್ತೇಸರರಾಗಿ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾದ ಜನಾರ್ಧನ ಪೂಜಾರಿ, ವಿನಯ ಕುಮಾರ್ ಸೊರಕೆಯವರ ಆಪ್ತರಾಗಿದ್ದರು. ಮೃತರು ಪತ್ನಿ ಸುಭಾಷಿಣಿ, ಪುತ್ರ ನವೀನ್, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.