ಪುತ್ತೂರು: ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡಿದ ಬಿಜೆಪಿ ಯುವಮೋರ್ಛಾ ರಾಜ್ಯ ಮಾಧ್ಯಮ ಸಂಚಾಲಕ ಅಕ್ಷಯ್ ರೈ ದಂಬೆಕ್ಕಾನ ನಿರ್ಮಾಣದ `ಕತ್ತರಿ’ ಸಿಂಬಲ್ನ ಕಿರುಚಿತ್ರದ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ಕುಡ್ಚಿ ಶಾಸಕ ಪಿ.ರಾಜುರವರೊಂದಿಗೆ ಹಲವು ಸಂದೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಧೂಮಪಾನ, ಮದ್ಯಪಾನ ಸೇರಿದಂತೆ ಮಾದಕ ವ್ಯಸನಗಳಿಗೆ ಇಂದಿನ ಯುವಜನಾಂಗ ಬಲಿಯಾಗದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಡ್ರಗ್ಸ್,ಗಾಂಜದಂತಹ ಅಮಲು ಪದಾರ್ಥಗಳ ಸೇವನೆಗೆ ಯುಜಜನತೆ ಬಲಿಯಾಗಬಾರದು ಎಂಬ ಉತ್ತಮ ಸಂದೇಶಗಳನ್ನು ರಾಜುರವರು ಈ ಚಿತ್ರದಲ್ಲಿ ಹೇಳಿಕೊಂಡಿದ್ದಾರೆ. ಚಿತ್ರ ನಿರ್ದೇಶಕ ರತನ್ ರಮೇಶ್ ಪೂಜಾರಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ ಗೌಡ ಹಾಗೂ ಯುವಮೋರ್ಛಾ ಅಧ್ಯಕ್ಷ ಪ್ರಶಾಂತ್ ಗೌಡ ಜತೆಗಿದ್ದರು. ದುಷ್ಟ ಚಟಗಳಿಗೆ ಯುವಜನಾಂಗ ಬಲಿಯಾಗದಂತೆ ಎಚ್ಚರಿಸುವ ಕಿರುಚಿತ್ರ ಇದಾಗಿದ್ದು ಚಿತ್ರವು ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.