ಪುತ್ತೂರು: ಶಾಂತಿಗೋಡು ಗ್ರಾಮ, ಆನಡ್ಕದ ಕಾಯರಪೂ ನಿವಾಸಿ ಶ್ರೀ ಕೆ ಶಾಮ ಭಟ್ಟ (93) ಅವರು ಮೇ.2 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ದೈವಾಧೀನರಾದರ. ಪರೋಪಕಾರಿ, ಸ್ನೇಹ ಜೀವಿ, ನೇರ ನಡೆ ನುಡಿಗೆ ಹೆಸರಾಗಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು, ಪ್ರಗತಿಪರ ಕೃಷಿಕರಾಗಿದ್ದರು ಹಾಗೂ ಅನೇಕ ಜನರು ಇವರಿಂದ ಕೃಷಿ ವಿಚಾರದಲ್ಲಿ ಪ್ರೇರೇಪಿತರಾಗಿದ್ದಾರೆ. ಇವರು ಧರ್ಮ ಪತ್ನಿ, ಈರ್ವರು ಪುತ್ರರು, ಆರು ಮಂದಿ ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.