- ಕಾಂಗ್ರೆಸ್ ಮುಖಂಡರ ಭೇಟಿ- ಮನೆ ದುರಸ್ಥಿಗೆ ನೆರವು
ಪುತ್ತೂರು: ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಅಸ್ಮಾ ಎಂಬವರ ಮನೆಯ ಮಾಡಿನ ಶೀಟ್ ಹಾರಿ ಹೋಗಿದ್ದು ಮನೆಯೊಳಗಿದ್ದವರು ಅಪಾಯದಿಂದ ಪಾರಾದ ಘಟನೆ ಮೇ. 4 ರಂದು ನಡೆದಿದೆ.
ಮನೆಯ ಮಾಡಿಗೆ ಸಿಮೆಂಟ್ ಶೀಟ್ ಅಳವಡಿಸಲಾಗಿತ್ತು. ಗಾಳಿ ಬರುವ ವೇಳೆ ಇಬ್ಬರು ಪುಟ್ಟ ಮಕ್ಕಳು ಹಾಗೂ ಅಜ್ಜಿ ಹಾಗೂ ಅಸ್ಮಾರವರು ಮನೆಯೊಳಗಿದ್ದರು. ಭಾರೀ ಗಾಳಿಗೆ ಸಿಮೆಂಟ್ ಶೀಟ್ ಮನೆಯೊಳಗೆ ತುಂಡಾಗಿ ಬಿದ್ದಿದೆ. ಇದರಿಂದಾಗಿ ಸುಮಾರು ಹತ್ತು ಸಾವಿರ ರೂ ನಷ್ಟಸಂಭವಿಸಿದೆ.
ಕಾಂಗ್ರೆಸ್ ನಾಯಕರ ಭೇಟಿ
ಹಾನಿಗೊಳಗಾದ ಅಸ್ಮಾರವರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಿಯೋಗ ಮನೆ ಪುನರ್ ನಿರ್ಮಾಣ ಭರವಸೆಯನ್ನು ನೀಡಿದೆ. ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪುರಂದರ್ ರೈ ಯವರು ಮನೆಗೆ ಬೇಕಾದ ಶೀಟನ್ನು ನೀಡಿದ್ದು , ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮನೋಹರ್ ರೈ ಎಂಡೆಸಾಗು, ಕಾರ್ಯದರ್ಶಿ ಹಬೀಬ್ ಕಣ್ಣೂರು ಹಾಗೂ ಕೆದಂಬಾಡಿ ಗ್ರಾಪಂ ಸದಸ್ಯೆ ಅಸ್ಮಾರವರು ಭೇಟಿ ನೀಡಿ ಮನೆಯ ದುರಸ್ಥಿ ಕಾರ್ಯಕ್ಕೆ ಹಣಕಾಸಿನ ನೆರವನ್ನು ನೀಡಿದ್ದಾರೆ.