ನೆಲ್ಯಾಡಿ: ಕೇರಳದ ಕಾಸರಗೋಡಿನ ಚಟ್ಟಂಚಲ್ ಎಂಬಲ್ಲಿರುವ ಹೆಸರಾಂತ ಹೋಟೆಲ್ ಮಿಲನ್ ಇದರ ಸಹ ಸಂಸ್ಥೆ ‘ಹೋಟೆಲ್ ಮಿಲನ್’ ಫ್ಯಾಮಿಲಿ ರೆಸ್ಟೋರೆಂಟ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯಲ್ಲಿ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಸೈಂಟ್ ಮೇರಿಸ್ ಕಾಂಪ್ಲೆಕ್ಸ್ನಲ್ಲಿ ಡಿಸಿಸಿ ಬ್ಯಾಂಕ್ನ ಕೆಳಗೆ ಮೇ 26ರಂದು ಶುಭಾರಂಭಗೊಂಡಿತು.
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶೌಖತ್ತಾಲಿ ಅಮಾನಿ ಹಾಗೂ ಅಲ್ಹಾಜ್ ಅಬುಹನ್ನತ್ ಮೊಹಮ್ಮದ್ ಸಖಾಫಿಯವರು ದುವಾಶೀರ್ವಚನ ನೆರವೇರಿಸಿದರು. ಹೊಸಮಜಲು ಜಲಾಲಿಯಾ ಜುಮಾ ಮಸೀದಿಯ ಖತೀಬರಾದ ಉಮ್ಮರ್ ಕುಂಞಿ ಮುಸ್ಲಿಯಾರ್, ನೆಲ್ಯಾಡಿ ಹಾಗೂ ಹೊಸಮಜಲು ಮದ್ರಸದ ಅಧ್ಯಾಪಕರು, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸಿ.ಕೆ.ಅಬ್ದುಲ್ ರಹಿಮಾನ್, ಮಾಜಿ ಅಧ್ಯಕ್ಷ ಎನ್.ಎಸ್.ಸುಲೈಮಾನ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ನೋಟರಿ ಮತ್ತು ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು, ಹೊಸಮಜಲು ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕೆ.ಇ.ಅಬೂಬಕ್ಕರ್, ನೆಲ್ಯಾಡಿ ಸೈಂಟ್ ಮೇರಿಸ್ ಕಾಂಪ್ಲೆಕ್ಸ್ ಮಾಲಕ ಟೋಮಿ ವಿ.ಜೆ., ಬಿಲ್ಡ್-ಟೆಕ್ ಐಎನ್ಸಿಯ ಮನೋಜ್, ಸಿಟಿ ಗ್ಲಾಸ್ & ಪ್ಲೈವುಡ್ನ ಹನೀಫ್ ಸಿಟಿ, ಕೆಜಿಎನ್ ಶಾಮಿಯಾನದ ಮಾಲಕ ಶುಕೂರು, ನೆಲ್ಯಾಡಿ ಮುಶ್ರತುಲ್ ಮುಸಾಕಿನ್ ಯಂಗ್ಮೆನ್ಸ್ ಅಧ್ಯಕ್ಷ ಅಶ್ರಫ್ ಸಿ.ಎಂ., ಉಸ್ಮಾನ್ ಜೌಹಾರಿ, ಉಮ್ಮರ್ ತಾಜ್, ಬಿನು ಚಾಕೋ, ಅನೂಪ್, ಅಶ್ರಫ್ ಶಕ್ತಿ, ಇಲಿಯಾಸ್ ಶಾಂತಿಬೊಟ್ಟು, ಇಸ್ಮಾಯಿಲ್ ಎನ್.ಕೆ.ಶಾಂತಿಬೊಟ್ಟು, ಡಿಸಿಸಿ ಬ್ಯಾಂಕ್ನ ನೆಲ್ಯಾಡಿ ಶಾಖಾ ಮೇನೇಜರ್ ಭಾಸ್ಕರ ಪಿ., ಸಿಬ್ಬಂದಿಗಳಾದ ಇಸ್ಮಾಯಿಲ್, ದಿನೇಶ್ ಎಂ., ಭಾರತ್ ಹಾರ್ಡ್ವೇರ್ ಮಾಲಕ ಹನೀಫ್, ಮಾತಾ ಲ್ಯಾಬ್ನ ಕೆ.ಜೆ.ಸೋಸ್, ಸಿರಾಜ್ ದೌಲ ನೆಲ್ಯಾಡಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಮಾಲಕ ಕೋಯಾರವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮಲ್ಲಿ ಶುಚಿ, ರುಚಿಯಾದ ಕೇರಳ ಶೈಲಿಯ, ಅರೇಬಿಕ್, ಚೈನೀಸ್, ಇಂಡಿಯನ್ ಶೈಲಿಯ ಸಸ್ಯಹಾರಿ ಹಾಗೂ ಮಾಂಸಹಾರಿ ಊಟ, ಉಪಾಹಾರ ಲಭ್ಯವಿದೆ. ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆಯೂ ಇದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
ಕುಂಬೋಳ್ ತಂಙಳ್ ಭೇಟಿ:
ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ರವರು ಉದ್ಘಾಟನೆಗೆ ಮೊದಲು ಫ್ಯಾಮಿಲಿ ರೆಸ್ಟೋರೆಂಟ್ಗೆ ಭೇಟಿ ನೀಡಿ ದುವಾಶೀರ್ವಚನ ನೆರವೇರಿಸಿದರು.