ಪುತ್ತೂರು: ಕುಂಬ್ರ ಬದ್ರಿಯಾ ನಗರ ಅಲ್ ಬದ್ರಿಯಾ ಮದ್ರಸ ವಿದ್ಯಾರ್ಥಿಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಬದ್ರಿಯಾ ನಗರ ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಅಬ್ದುಲ್ ಅಝೀಝ್ ಸಅದಿ ಮಾತನಾಡಿ” ನಾವು ವಾಸಿಸುವ ಪರಿಸರವನ್ನು ಸ್ವಚ್ಛ ಮತ್ತು ಸುಂದರ ವಾಗಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಪರಿಸರ ಸಂರಕ್ಷಣೆ ಮತ್ತು ಇಸ್ಲಾಂ ಧರ್ಮ ಅವಿನಾಭಾವ ಸಂಬಂಧ ಹೊಂದಿದ್ದು ನೆಮ್ಮದಿಯ ಪರಿಸರ ನಿರ್ಮಿಸಲು ಗಿಡ ನೆಡುವುದು ಮುಸ್ಲಿಮರ ಪಾಲಿಗೆ ಪುಣ್ಯ ಮತ್ತು ಪ್ರತಿಫಲಾರ್ಹ ಕಾರ್ಯವಾಗಿದೆ ಎಂದರು. ಅಲ್ ಬದ್ರಿಯಾ ಮದ್ರಸ ಸದರ್ ಮುಅಲ್ಲಿಂ ಅಬೂಬಕರ್ ಸಿದ್ದೀಖ್ ಸಅದಿ,ಮದ್ರಸ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..