ಪುತ್ತೂರು: ನೂಪುರ್ ಶರ್ಮಾ ಬೆಂಬಲಿಗ ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆ ಯನ್ನು ಖಂಡಿಸಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಿಂದ ಪುತ್ತೂರು ತಾಲೂಕು ಆಡಳಿತ ಸೌಧ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಅಲ್ಪಸಂಖ್ಯಾತರ ತುಷ್ಟೀಕರಣ ರೀತಿಯಿಂದಾಗಿ ಬಹುಸಂಖ್ಯಾತರ ಮೇಲೆ ಕೇಸುಗಳಾಗುತ್ತಿವೆ. ರಾಷ್ಟ್ರೀಯ ಪರ ಕೆಲಸ ಮಾಡಿದವರಿಗೆ ನಮ್ಮ ಬೆಂಬಲವಿದೆ. ಆದರೆ ಭಯೋತ್ಪಾದನೆ ಮಾಡುವವರಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ. ರಾಷ್ಟ್ರೋದ್ರೋಹ, ಧರ್ಮದ್ರೋಹ ಮಾಡಿದವರಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದ ಅವರು ಶಸ್ತ್ರ ಮತ್ತು ಶಾಸ್ತ್ರವನ್ನು ಯಾವ ರೀತಿ ಆಚರಿಸಬೇಕೆಂದು ಜಗತ್ತಿಗೆ ತೋರಿಸಿಕೊಟ್ಟ ಈ ದೇಶಕ್ಕೆ ಶಸ್ತ್ರ ಹಿಡಿಯಲು ಗೊತ್ತಿದೆ ಎಂದು ಹೇಳಿದರು. ಕನ್ಹಾಯ್ಯ ಲಾಲ್ ಹಂತಕರನ್ನು ತಕ್ಷಣ ಶೂಟೌಟ್ ಮಾಡಿ ಎಂದರು.
ನಮಗೂ ಬೆಂಕಿ ಹಾಕಲು ಗೊತ್ತಿದೆ:
ಈ ಪುಣ್ಯ ಭೂಮಿಯಲ್ಲಿ ಯಾವ ದುಷ್ಟತನಕ್ಕೆ, ರಾಕ್ಷಸಿತನಕ್ಕೆ ಬೆಂಕಿ ಹಾಕಬೇಕೋ ಆಗ ಬೆಂಕಿ ಹಾಕಲಿದ್ದೇವೆ. ನಮಗೂ ಬೆಂಕಿ ಹಾಕಲು ಗೊತ್ತಿದೆ. ರಾಷ್ಟ್ರೀಯತೆಯನ್ನು ಒಪ್ಪಿಕೊಂಡವರು ಮಾತ್ರ ಈ ರಾಷ್ಟ್ರದಲ್ಲಿ ಇರಲಿ. ಭಾರತ ನಾಶ ಪಣ ತೊಡುವವರಿಗೆ ಎಚ್ಚರಿಕೆ ನೀಡಲಿದ್ದೇವೆ ಎಂದು ಮುರಳಿಕೃಷ್ಣ ಹಸಂತಡ್ಕ ಅವರು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜನಾರ್ದನ್ ಬೆಟ್ಟ, ಅಜಿತ್ ಹೊಸಮನೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.