ಪುತ್ತೂರು: ಕಾಂಗ್ರೆಸ್ ಅಲ್ಪ ಸಂಖ್ಯಾತ ಪಾಣಾಜೆ ಘಟಕದ ನೂತನ ಅಧ್ಯಕ್ಷರಾಗಿ ಲತೀಫ್ ಮುಸ್ಲಿಯಾರ್ ಕಂಚಿಲ್ಕುಂಜ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಪರ್ಪಳ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಸಿನಾನ್ ಜಾಲಗದ್ದೆ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ, ಸಲೀಂ ಎಂ.ಕೆ ಹಾಗೂ ಅಲಿ ಕೊಡಿಮೂಲೆ, ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ಲಾ ಕುಂಞಿ ಕಂಚಿಲ್ಕುಂಜ ಹಾಗೂ ಸಿದ್ದೀಕ್ ಬನತ್ತಡಿ ಆಯ್ಕೆಯಾದರು.
ಸದಸ್ಯರುಗಳಾಗಿ ಯೂಸುಫ್ ಕಂಚಿಲ್ಕುಂಜ, ಸಿದ್ದೀಕ್ ಕಲ್ಲಪದವು, ಮರ್ಶಳ ಡಿಸೋಜ ಪರಾರಿ, ನಾಸಿರ್ ಎನ್ ಎಸ್, ಕರೀಂ ಕೊಡಿಮೂಲೆ, ಅಬ್ದುಲ್ಲಾ ಕುಂಜಿ ಪರಾರಿ, ಮೊಯಿದು ಜಾಲಗದ್ದೆ, ಅಬ್ದುಲ್ಲಾ ಸಅದಿ ಎನ್ನಗದ್ದೆ, ಉಮರ್ ಮುಸ್ಲಿಯಾರ್ ಎನ್ನಗದ್ದೆ, ಅಶ್ರಫ್ ಕೊಡಿಮೂಲೆ, ಖಲೀಲ್ ಖಾನ, ಶರೀಫ್ ಕಡಮಾಜೆ, ಇಹ್ಸಾನ್ ಕಂಚಿಲ್ಕುಂಜ, ಮಹಮ್ಮದ್ ಆರ್ಲಪದವು, ಬಶೀರ್ ಮುಸ್ಲಿಯಾರ್ ಕಂಚಿಲ್ಕುಂಜ, ಅಶ್ರಫ್ ಫೈರೋಜ್ ಆರ್ಲಪದವು ಆಯ್ಕೆಯಾಗಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಶಕೂರ್ ಹಾಜಿ ಅಧ್ಯಕ್ಷತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಯಿಲ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಪುತ್ತೂರು ಬ್ಲಾಕ್ ಉಸ್ತುವಾರಿ ಉಮರ್ ಜನಪ್ರಿಯ, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಾಬು ರೈ ಕೋಟೆ, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಶಾಫಿ ಕಂಚಿಲ್ಕುಂಜ, ಪಾಣಾಜೆ ಗ್ರಾ.ಪಂ ಸದಸ್ಯೆ ಮೈಮೂನತುಲ್ ಮೆಹ್ರಾ, ಪಾಣಾಜೆ ವಲಯ ಮಹಿಳಾ ಘಟಕದ ಅಧ್ಯಕ್ಷೆ ಸೀತಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಬಾಬು ರೈ ಕೋಟೆ ಸ್ವಾಗತಿಸಿದರು. ಮುನೀರ್ ಪರ್ಪಲ ವಂದಿಸಿದರು.