ಪುತ್ತೂರು : ನೆಹರೂನಗರದಲ್ಲಿರುವ ರೋಹಿಣಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಜೂ.27 ರಿಂದ 29ರವರೆಗೆ ನಡೆದ ಉಚಿತ ಪೈಂಟಿಂಗ್ ತರಬೇತಿಯ ಸಮಾರೋಪ ಸಮಾರಂಭ ಜೂ.29ರಂದು ವಿಜಯಕಿರಣ ಹಾಲ್ನಲ್ಲಿ ನಡೆಯಿತು. ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗ್ಗಡೆ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಅಸಹಾಯಕ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ಮಾಸ್ಟರ್ ಪ್ಲಾನರಿಯ ರೈಟರ್ ಶಾರದಾ, ನ್ಯಾಯವಾದಿ ಅಶ್ವಿನಿ ಉಪಸ್ಥಿತರಿದ್ದರು. ರೋಹಿಣಿ ಆಚಾರ್ಯ ಸ್ವಾಗತಿಸಿದರು. ಹೊಲಿಗೆ ಕೇಂದ್ರದ ವಿದ್ಯಾರ್ಥಿಗಳು ಸಹಕರಿಸಿದರು.