ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಭಜನಾ ಮಂದಿರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ವಸಂತ ಗೌಡ ಚಾಕೋಟೆತ್ತಡಿ ಅವರು ಚೆನ್ನೆಮನೆ ಆಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶೇಷಪ್ಪ ಗೌಡ ಮೀನಕೊಳೆಂಜಿ ಅವರು ಆಟಿ ವಿಶೇಷತೆಯ ಕುರಿತು ಮಾತನಾಡಿದರು. ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಸಚಿನ್ ಗೌಡ ಅಂಗಡಿಮೂಲೆ, ಕಾರ್ಯದರ್ಶಿ ವಿಜಯ ಬಿ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಸೋಮಪ್ಪ ಗೌಡ ಜಾರಿಗೆತ್ತಡಿ ಸ್ವಾಗತಿಸಿ,ಸದಸ್ಯೆ ವಾಣಿಶ್ರೀ ಎ.ಎಲ್ ವಂದಿಸಿದರು. ವೀಣಾಶ್ರೀ ಎ.ಎಲ್ ಅವರು ಕ್ರೀಡಾಕೂಟದ ಸ್ಫರ್ಧಾ ವಿಜೇತರ ಪಟ್ಟಿ ವಾಚಿಸಿದರು.ಪುಟ್ಟಣ್ಣ ಪರಣೆ ಅವರಿ ಕಾರ್ಯಕ್ರಮ ನಿರೂಪಿಸಿದರು.
ಆಟೋಟ ಸ್ಪರ್ಧೆ,ಆಟಿಯ ವಿಶೇಷ ಖಾದ್ಯಗಳ ಪ್ರದರ್ಶನ, ಸಹ ಭೋಜನ ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೀಟ ಸ್ಪರ್ಧೆಗಳು ನಡೆಯಿತು. ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಭಜನಾ ಮಂಡಳಿಯ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿ ಭಜನಾ ಮಂದಿರಕ್ಕೆ ತಂದು ಸಹಬೋಜನ ನಡೆಯಿತು.ಸುಮಾರು 16 ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು.