ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಆ. 5ರಂದು ಬಂಟರ ಭವನದಲ್ಲಿ ಜರಗಿತು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ನ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ, ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ, ರೋಟರ್ಯಾಕ್ಟ್ ಸಮುದಾಯ ಸೇವಾ ನಿರ್ದೇಶಕ ಶಶಿಧರ ಕೆ. ಮಾವಿನಕಟ್ಟೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಬೊಳುವಾರು ಆಕಾಶ್ ಕೋಚಿಂಗ್ ಸೆಂಟರ್ನ ನಾಗಶ್ರೀ ಐತಾಳ್ ಅವರು ಮುಳಿಯ ಜ್ಯುವೆಲ್ಸ್, ರೇಡಿಯೋ ಪಾಂಚಜನ್ಯ ಪ್ರಾಯೋಜಕತ್ವದಲ್ಲಿ ರೋಟರ್ಯಾಕ್ಟ್ ಕ್ಲಬ್ ಹಮ್ಮಿಕೊಂಡ ‘ಮನಸ್ಸಿನ ಆರೋಗ್ಯ’ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ರೋಟರ್ಯಾಕ್ಟ್ ಕ್ಲಬ್ನ ರಾಹುಲ್, ನವೀನ್ಚಂದ್ರ, ಪುರುಷೋತ್ತಮ್ ಸಹಕರಿಸಿದರು.
ರೋಟರ್ಯಾಕ್ಟ್ ಕ್ಲಬ್ನ ವಾರ್ಷಿಕ ಕಾರ್ಯಕ್ರಮವನ್ನು ಉಮಾನಾಥ ಪಿ.ಬಿ. ಉದ್ಘಾಟಿಸಿದರು.
ನಾಗಶ್ರೀ ಐತಾಳ್ ಕಾರ್ಯಾಗಾರ ನಡೆಸಿಕೊಟ್ಟರು.