ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಎ.ಸಿ ಯಿಂದ ಧ್ವಜಾರೋಹಣ , ಸಂದೇಶ

0

ಕಿಲ್ಲೆ ಮೈದಾನದಲ್ಲಿ ತುಂಬಿ ತುಳುಕಿದ ರಾಷ್ಟ್ರಧ್ವಜ ಹಿಡಿದ ವಿದ್ಯಾರ್ಥಿಗಳು

ಪುತ್ತೂರು: ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಿತು. ರಾಷ್ಟ್ರಧ್ವಜ ಹಿಡಿದ ವಿದ್ಯಾರ್ಥಿಗಳು ಕಿಲ್ಲೆ ಮೈದಾನದಲ್ಲಿ ತುಂಬಿ ಅಮೃತ ಮಹೋತ್ಸವವನ್ನು ಆಚರಿಸಿದರು.

ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಧ್ವಜಾರೋಹಣ ಮಾಡಿ, ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸರು, ಕೊಂಬೆಟ್ಟು ಶಾಲೆಯ ಪೊಲೀಸ್ ಕೆಡೆಟ್, ಎನ್ ಸಿ ಸಿ, ಸಂತ ಫಿಲೋಮಿನಾ ಶಾಲೆಯ ನೇವಿ, ಆರ್ಮಿ, ಏರ್ ಪೋರ್ಸ್ ಕೆಡೆಟ್, ರಾಮಕೃಷ್ಣ ಪ್ರೌಢಶಾಲೆಯ ಸ್ಕೌಟ್, ಗೈಡ್ಸ್ ತಂಡದಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಧ್ವಜಾರೋಹಣಕ್ಕೂ ಮುಂದೆ ಅಮರ್ ಜವಾನ್ ಸ್ಮಾರಕ ಜ್ಯೋತಿಯಲ್ಲಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here