ಮುಕ್ರಂಪಾಡಿಯಲ್ಲಿ ಸ್ಕೂಟರ್, ಕಾರು ಡಿಕ್ಕಿ -ಸ್ಕೂಟರ್ ಸವಾರ ಕಂಪ ನಿವಾಸಿ ದೀಕ್ಷಿತ್ ಗಂಭೀರ

0

ಪುತ್ತೂರು: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮುಕ್ರಂಪಾಡಿ ಸಮೀಪ ಸೆ.3ರ ತಡ ರಾತ್ರಿ ಸಂಭವಿಸಿದೆ.

ಮಂಗಳೂರು ಕಡೆಯಿಂದ ಈಶ್ವರಮಂಗಲಕ್ಕೆ ಹೋಗುತ್ತಿದ್ದ ಕಾರು ಮತ್ತು ಮುಂಡೂರು ಕಡೆಯಿಂದ ಬರುತ್ತಿದ್ದ ಸ್ಕೂಟರ್ ನಡುವೆ ಮುಕ್ರಂಪಾಡಿ ಸಮೀಪ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಮುಂಡೂರು ಕಂಪ ನಿವಾಸಿ ದೀಕ್ಷಿತ್ ಎಂಬವರು ತೀವ್ರ ಗಾಯಗೊಂಡಿದ್ದಾರೆ. ಸಹಸವಾರ ಕಂಪ ನಿವಾಸಿ ವಿನೋದ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತದ ತೀವ್ರತೆಗೆ ಸ್ಕೂಟರ್‌ನಲ್ಲಿದ್ದ ವಿನೋದ್ ಮತ್ತು ದೀಕ್ಷಿತ್ ಕಾರಿನ ಬೊನೆಟ್ ಮೇಲೆ ಬಿದಿದ್ದರು. ಕಾರು ಸ್ಕೂಟರ್ ಅನ್ನು ತುಸು ದೂರ ಡಾಮಾರು ರಸ್ತೆಯಲ್ಲಿ ಎಳೆದೊಯ್ದಿದೆ. ಕಾರಿನ ಎದುರಿನ ಗಾಜು ಹುಡಿಯಾದ್ದರಿಂದ ಕಾರಿನಲ್ಲಿದ್ದವ ಪೈಕಿ ಓರ್ವರಿಗೆ ಗಾಯವಾಗಿದೆ. ತೀವ್ರ ಗಾಯಗೊಂಡ ದೀಕ್ಷಿತ್ ಅವರನ್ನು ಮಂಗಳೂರು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here