ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 163.30 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ – 63.39 ಲಕ್ಷ ರೂ.ನಿವ್ವಳ ಲಾಭ

0

ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2021-22ನೇ ಸಾಲಿನಲ್ಲಿ 163.30 ಕೋಟಿ ರೂ.ಗೂ ಮಿಕ್ಕಿವ್ಯವಹಾರ ನಡೆಸಿದ್ದು, ಸುಮಾರು 63.39 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಸೆ.10ರಂದು ಬೆಳಗ್ಗೆ 11ಕ್ಕೆ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರುಸಮುದಾಯ ಭವನದಲ್ಲಿ ವಾರ್ಷಿಕ ಮಹಾ ಸಭೆನಡೆಯಲಿದೆ ಎಂದು ಸಂಘದ ಅದ್ಯಕ್ಷ ನರಸಪ್ಪಪೂಜಾರಿ ಎನ್. ರವರು ಹೇಳಿದರು.


ಅವರು ಸಹಕಾರಿಯಲ್ಲಿ ಸೆ.೬ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 2021-22ನೇ ಸಾಲಿನಲ್ಲಿ 114 ಮಂದಿ ಸದಸ್ಯರಾಗಿಸೇರ್ಪಡೆಯಾಗಿದ್ದು, 23.45ಲಕ್ಷ ರೂ. ಪಾಲುಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 5084 ಎತರಗತಿ ಸದಸ್ಯರಿದ್ದು, 2.95ಕೋಟಿ ರೂ. ಪಾಲುಬಂಡವಾಳ ಹೊಂದಿದೆ. ಸರ್ಕಾರದ ಬಿ ತರಗತಿಯ 81ಸಾವಿರ ರೂ ಪಾಲುಬಂಡವಾಳವಿದ್ದು, ಒಟ್ಟು 2.96ಕೋಟಿಪಾಲು ಬಂಡವಾಳವಿದೆ. ಒಟ್ಟು ಠೇವಣಾತಿಯಲ್ಲಿಶೇ.19.03 ಹೆಚ್ಚಳವಾಗಿದೆ ಎಂದರು.
ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ27.16 ಕೋಟಿ ಸಾಲ ನೀಡಿದ್ದು, ಇದರಲ್ಲಿ ಮಂಗಳಾ ಕಿಸಾನ್‌ಕಾರ್ಡ್ ಹೊಂದಿದ ರೈತ ಸದಸ್ಯರಿಗೆ 11.70ಕೋಟಿ ಬೆಳೆಸಾಲ ವಿತರಿಸಲಾಗಿದೆ. ಶೇ.94.27 ರಷ್ಟು ವಸೂಲಾತಿಮಾಡಲಾಗಿದೆ. ರಾಜ್ಯ ಸರ್ಕಾರದಿಂದ 71.81ಲಕ್ಷ ಎಸ್ ಟಿಸಾಲಗಳ ಬಡ್ಡಿ ಹಾಗೂ 11.12ಲಕ್ಷ ಯಂ ಟಿ ಸಾಲಗಳಬಡ್ಡಿ ಮತ್ತು 1.48ಲಕ್ಷ ಯಸ್ ಯಚ್ ಜಿ ಸಾಲದ ಬಡ್ಡಿಹಾಗೂ ಕೇಂದ್ರ ಸರ್ಕಾರದಿಂದ 1,02,77,289 ರೂ ಬಡ್ಡಿಬರಲು ಬಾಕಿ ಇದೆ. ಆಹಾರ ಧಾನ್ಯ, ಸೀಮೆ ಎಣ್ಣೆ, ಕೊಂಕಣಗ್ಯಾಸ್, ರಾಸಾಯನಿಕ ಗೊಬ್ಬರ, ಕೀಟನಾಶಕಗಳು68.43ಲಕ್ಷ ರೂ ಮೌಲ್ಯದ್ದು ಮಾರಾಟವಾಗಿದ್ದು, 7.85ಲಕ್ಷ ರೂ. ಲಾಭ ಬಂದಿದೆ ಎಂದು ತಿಳಿಸಿದರು.

ವಿಟ್ಲ ಪ್ರಧಾನ ಕಛೇರಿಯ ಮೇಲ್ಚಾವಣಿಯನ್ನು ನಿರ್ಮಾಣಮಾಡಿದ್ದು, ಕಛೇರಿ ಹಾಗೂ ಸಭಾಂಗಣ ವ್ಯವಸ್ಥೆ ಮಾಡಲಾಗುತ್ತಿದೆ. ಗೋದಾಮು ನಿರ್ಮಾಣದ ಯೋಜನೆಯನ್ನುಹಾಕಿಕೊಳ್ಳಲಾಗಿದೆ. ಕೃಷಿ ಅಭಿವೃದ್ಧಿಯ ಸಾಲಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಸಾಲ ವಸೂಲಾತಿಯ ವಿಷಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ.ಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯ ಬೆಳೆಗಾರರ ಮಕ್ಕಳನ್ನು ಗುರುತಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರಾದ ಉದಯ ಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರ್,ಸದಾನಂದ ಗೌಡ, ರಾಘವೇಂರ ಪೈ, ದಿನೇಶ ಕೆ.,ವಾಸು ಸಿ. ಎಚ್., ಶಿವಪ್ಪ ನಾಯ್ಕ, ಅಚ್ಯುತ್ ನಾಯಕ್, ಗೌರಿ ಎಸ್.ಎನ್. ಭಟ್, ಸಂಗೀತಾ ಎನ್., ಕವಿತಾ ಕೆ. ಎಲ್., ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ. ಪಿ. ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here