ಸುದ್ದಿ ಜನಾಂದೋಲನ ವೇದಿಕೆಯಿಂದ ಉತ್ತಮ ಅಧಿಕಾರಿಯಾಗಿ ಆಯ್ಕೆಯಾದ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಪಿ.ರವರಿಗೆ ‘ಎಂ.ಡಿ ಅಭಿನಂದನಾ ಪತ್ರ’

0

ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಲಂಚ, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಲಂಚ ರಹಿತವಾಗಿ, ಉತ್ತಮ ಸೇವೆ ನೀಡುವ ಅಧಿಕಾರಿಯಾಗಿ ಜನರಿಂದ ಆಯ್ಕೆಯಾಗಿರುವ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಪಿ.ರವರಿಗೆ ನಿಗಮದ ವ್ಯವಸ್ಥಾಪನಾ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದನಾ ಪತ್ರ ನೀಡಿದ್ದಾರೆ.

ಸುದ್ದಿ ಬಿಡುಗಡೆ ಪತ್ರಿಕೆಯು ನಡೆಸಿದ ಜನ ಮತದ ಸಂಗ್ರಹದಲ್ಲಿ ಲಂಚ ರಹಿತವಾಗಿ, ಉತ್ತಮ ಸೇವೆ ಮಾಡುತ್ತಿರುವ ಅಧಿಕಾರಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ತಮ್ಮ ನಿಸ್ಪೃಹ ಸೇವೆ, ಪಾರದರ್ಶಕ ಆಡಳಿತ, ಸಾರ್ವಜನಿಕ ವಲಯದಲ್ಲಿ ನಿಗಮದ ಬಗ್ಗೆ ಒಳ್ಳೆಯ ನಂಬಿಕೆ ಹಾಗೂ ಅಭಿಪ್ರಾಯ ಮೂಡುವಂತೆ ಮಾಡಿ, ಇತರೇ ಅಧಿಕಾರಿಗಳಿಗೆ ಆದರ್ಶಪ್ರಾಯರಾಗಿದ್ದೀರಿ. ಈ ಪ್ರಾಮಾಣಿಕ ಸೇವೆಯು ಸಂಸ್ಥೆಗೆ ಗೌರವ ತಂದಿದ್ದು ತಮ್ಮನ್ನು ಅಭಿನಂದಿಸಲಾಗಿದೆ ಎಂದು ವ್ಯವಸ್ಥಾಪಕಾ ನಿರ್ದೇಶಕರು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here