ಕೊಂಬಾರು ಗ್ರಾ.ಪಂ. ಮಟ್ಟದ ಕ್ರೀಡಾಕೂಟ-ಕಬಡ್ಡಿ ಪಂದ್ಯಾಟ

0

ಕಡಬ: ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಕಡಬ ಮತ್ತು ಗ್ರಾಮ ಪಂಚಾಯತ್ ಕೊಂಬಾರು ಇದರ ವತಿಯಿಂದ ಪಂಚಾಯತ್ ಮಟ್ಟದ ಗ್ರಾಮೀಣ ಕ್ರೀಡಾಕೂಟ ೨೦೨೨-೨೩ ಕಬಡ್ಡಿ ಪಂದ್ಯಾಟ ಕೊಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸೆ.೧೨ರಂದು ನಡೆಯಿತು.

ಪಂದ್ಯಾಟವನ್ನು ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಚಿದಾನಂದ ಗೌಡ ಗುತ್ತುಮನೆ, ಮುಖ್ಯಗುರು ಚಿದಾನಂದ ಗೌಡ ಹೊಸಬೀಡು, ಶ್ರೀ ದುರ್ಗಾ ಗೆಳೆಯರ ಬಳಗ ಕೊಂಬಾರು ಇದರ ಪದಾಧಿಕಾರಿ ಕೋಕಿಲಾನಂದ ಹಾಗೂ ಕೊಂಬಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯತ್ ಪಿ.ಡಿ.ಓ. ರಾಘವೇಂದ್ರ ಗೌಡ, ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರು, ಆರೋಗ್ಯ ಇಲಾಖೆಯವರು, ಗ್ರಾಮ ಪಂಚಾಯತ್ ಸಂಜೀವಿನಿ ಸಂಘದ ಸದಸ್ಯರುಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪಧಾಧಿಕಾರಿ, ಸದಸ್ಯರುಗಳು, ಕ್ರೀಡಾಪಟುಗಳು, ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಾರೀರಿಕ ಶಿಕ್ಷಕರಾದ ಅಬ್ರಹಾಂ, ಚಂದ್ರಶೇಖರ ರಾಜೇಶ್ ಸತೀಶ್ಚಂದ್ರ ಅರುಣ್ ಕುಮಾರ್ ಕಾರ್ಯ ನಿರ್ವಹಿಸಿದರು. ಸಂಜೆ ಸಮರೋಪ ಸಮಾರಂಭ ನಡೆಯಿತು.

LEAVE A REPLY

Please enter your comment!
Please enter your name here