ಮುತ್ತಿನ ನಗರಿ ಪುತ್ತೂರಿನಲ್ಲಿ ಜೋಸ್ ಆಲುಕ್ಕಾಸ್‌ನ ಚತುರ್ಥ ಸಂಭ್ರಮಾಚರಣೆಗೆ ಚಾಲನೆ

0

ಪ್ರತೀ ಖರೀದಿಗೆ ಬೆಲೆಬಾಳುವ ಉಡುಗೊರೆ – ಗ್ರಾಹಕರಿಂದ ತುಂಬಿ ತುಳುಕಿದ ಶೋರೂಂ

  • ಸೆ.30ರ ವರೆಗೆ ಮುಂದುವರೆಯಲಿದೆ ವಾರ್ಷಿಕೋತ್ಸವದ ಕೊಡುಗೆ
  • ಪ್ರತಿ ಖರೀದಿಗೆ ಉಚಿತ ಬೆಲೆಬಾಳುವ ಉಡುಗೊರೆಗಳು
  • ಲಕ್ಕಿ ಡ್ರಾದ ಮೂಲಕ ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ
  • ಪ್ಲಾಟಿನಂ ಅಭರಣಗಳಿಗೆ 7% ರಿಯಾಯಿತಿ
  • ವಜ್ರಗಳ ಮೇಲೆ 20 % ರಿಯಾಯಿತಿ

ಪುತ್ತೂರು: ಭಾರತದ ಹೆಸರಾಂತ ಜ್ಯುವೆಲ್ಲರಿ ಮಳಿಗೆಯಾದ ಜೋಸ್ ಆಲುಕ್ಕಾಸ್ ಸಂಸ್ಥೆಯ ಪುತ್ತೂರು ಶಾಖೆಯ ನಾಲ್ಕನೇ ವರ್ಷದ ಸಂಭ್ರಮಾಚರಣೆಗೆ ಸೆ. 26 ರಂದು ಶಾಸಕ ಸಂಜೀವ ಮಠಂದೂರುರವರು ದೀಪ ಬೆಳಗಿಸಿ ಚಾಲನೆ ನೀಡಿದರು.

ರಾಜ್ಯ ಸಮಾಜಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷರಾದ ದಿವ್ಯಪ್ರಭಾ ಗೌಡ, ರಾಜ್ ಸೌಂಡ್ಸ್ & ಲೈಟ್ ಚಿತ್ರದ ನಟಿ ಚೈತ್ರಾ ಶೆಟ್ಟಿ ಹಾಗೂ ನಿರ್ದೇಶಕ ರಾಹುಲ್ ಅಮೀನ್, ಸಹನಿರ್ಮಾಪಕ ಪವನ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಗ್ರಾಹಕರು ತಮ್ಮ ಅನಿಸಿಕೆಗಳನ್ನು‌ ವ್ಯಕ್ತಪಡಿಸಿದರು.

ನಾಲ್ಕನೇ ವರ್ಷದ ಸಂಭ್ರಮಾಚರಣೆಯನ್ನು ಅತಿಥಿಗಳು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ದಿನದ ಪ್ರಥಮ ಗ್ರಾಹಕರೋರ್ವರಿಗೆ ಶಾಸಕ ಸಂಜೀವ ಮಠಂದೂರುರವರು ಚಿನ್ನಾಭರಣ ಹಸ್ತಾಂತರ ಮಾಡಿದರು.

ಏರಿಯಾ ಮ್ಯಾನೇಜರ್ ಬಿಜು ಸ್ವಾಗತಿಸಿದರು. ಅಕೌಂಟ್ ಮ್ಯಾನೇಜರ್ ಮನೋಜ್ , ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ರತೀಶ್ ಸಿ.ಪಿ. ಸಿಬ್ಬಂದಿಗಳಾದ ಶಿಬು, ರಾಜೇಶ್ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮಂಗಳೂರು ಶಾಖಾ ಫ್ಲೋರ್ ಮ್ಯಾನೇಜರ್ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ನಾಲ್ಕನೇ ವಾರ್ಷಿಕೋತ್ಸವದ ಭರ್ಜರಿ ಆಫರ್:

ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವುದರ ಮೂಲಕ ಅದ್ದೂರಿಯ ಆಚರಣೆಗೆ ಸಿದ್ಧತೆ ಮಾಡಲಾಗಿದೆ. ಹೊಸ ಸ್ಟಾಕ್, ಹೊಸ ಸಂಗ್ರಹಗಳು ಮತ್ತು ಹೊಚ್ಚ ಹೊಸ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಅಲ್ಲದೇ ಮದುವೆ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಘೋಷಿಸಿದೆ. ಪ್ರತಿ ಖರಿದೀಗೆ ಉಚಿತ ಬೆಲೆಬಾಳುವ ಉಡುಗೊರೆಗಳು, ಲಕ್ಕಿ ಡ್ರಾದ ಮೂಲಕ ಗೃಹೋಪಕರಣಗಳನ್ನು ಗೆಲ್ಲುವ ಅವಕಾಶ, ಪ್ಲಾಟಿನಂ ಆಭರಣಗಳಿಗೆ 7% ರಿಯಾಯಿತಿ, ವಜ್ರಗಳ ಮೇಲೆ 20% ರಿಯಾಯಿತಿ ದೊರೆಯಲಿದೆ. ಬಿಐಎಸ್ ಪ್ರಮಾಣೀಕೃತ 916 ಚಿನ್ನದ ಆಭರಣಗಳ ಅತ್ಯಪೂರ್ವ ಸಂಗ್ರಹವೇ ಇಲ್ಲಿದ್ದು, ಕಡಿಮೆ ಮೇಕಿಂಗ್ ಚಾರ್ಜಸ್ ಹಾಗೂ ಬಯ್ ಬ್ಯಾಕ್ ಗ್ಯಾರಂಟಿ ಯನ್ನು ಸಂಸ್ಥೆ ನೀಡಲಿದೆ. ವಾರ್ಷಿಕೋತ್ಸವದ ವಿಶೇಷ ಆಫರ್ ಗಳು ಸೆ.26ರಂದು ಆರಂಭಗೊಂಡು ಸೆ.30ರಂದು ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here