ಆಲಡ್ಕ ಹೋಮ್ ಪ್ರೊಡಕ್ಟ್ಸ್‌ನವರ ರಾಸಾಯನಿಕ ಪದಾರ್ಥ ಮುಕ್ತ ‘ಕಪ್ಪು ದ್ರಾಕ್ಷೆ ಹಣ್ಣಿನ ರಸ’ ಪುತ್ತೂರು ಮಾರುಕಟ್ಟೆಗೆ ಬಿಡುಗಡೆ

0

ಪುತ್ತೂರು: ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದೆ ಮನೆಯಲ್ಲಿಯೇ ತಯಾರಿಸಲಾಗುವ ರುಚಿಯಾದ ಪಾನೀಯ ‘ಕಪ್ಪು ದ್ರಾಕ್ಷೆ ಹಣ್ಣಿನ ರಸ’ ಸೆ.26ರಂದು ಬೆಳಿಗ್ಗೆ ಕುರಿಯ ಗ್ರಾಮದ ಬೂಡಿಯಾರ್ ಫಾರ್ಮ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

ಪದ್ಮಾವತಿ ಶೀನಪ್ಪ ರೈ ಕೊಡಂಕೀರಿ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿ ಉದ್ಯಮದ ಯಶಸ್ಸಿಗೆ ಶುಭಹಾರೈಸಿದರು.ಜಯಲಕ್ಷ್ಮೀ ಆರ್.ರೈ ಬೂಡಿಯಾರ್, ಸುಧಾಮಣಿ ರೈ ಬೂಡಿಯಾರ್, ಸಾಕ್ಷತಾ ರೈ,ಅಕ್ಷತಾ ರೈ, ಜಯಲಕ್ಷ್ಮೀ ರೈ, ಸುಧಾ ರೈ ಈ ಸಂದರ್ಭ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು, ಕಲಬೆರಕೆ ಪದಾರ್ಥಗಳಿಲ್ಲದೇ ಇರುವ ಮತ್ತು ಎಲ್ಲ ವಯೋಮಾನದವರಿಗೂ ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ಕಪ್ಪು ಹಣ್ಣಿನ ದ್ರಾಕ್ಷೆ ರಸವನ್ನು ಇದೀಗ ನಮ್ಮೂರಿನಲ್ಲಿಯೇ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಸ್ವಾವಲಂಬಿ ಜೀವನಕ್ಕೆ ಯುವಕರು ಈ ರೀತಿಯ ಗೃಹೋದ್ಯಮಗಳಿಗೆ ಮುಂದಾಗುವ ಮೂಲಕ ತಾವು ಬೆಳವಣಿಗೆ ಹೊಂದುವ ಜೊತೆಗೆ ಇನ್ನಷ್ಟು ಯುವಕರಿಗೆ ಉದ್ಯೋಗಾವಕಾಶವನ್ನೂ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ ಎಂದು ಹೇಳಿ,ಆಲಡ್ಕ ಹೋಂ ಪ್ರೊಡಕ್ಟ್ಸ್‌ನವರ ಈ ಪ್ರಯತ್ನಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಉದ್ಯಮ ಉತ್ತರೋತ್ತರ ಅಭಿವೃದ್ಧಿ ಹೊಂದುವಂತಾಗಲಿ ಎಂದು ಶುಭಹಾರೈಸಿದರು.

ಸುರೇಶ್ ಕಣ್ಣಾರಾಯ,ಜಯರಾಜ್ ಭಂಡಾರಿ ನೊಣಾಲು, ಕೆದಂಬಾಡಿ ಗ್ರಾ.ಪಂ.ಅಧ್ಯಕ್ಷ ರತನ್ ರೈ ಕುಂಬ್ರ, ವಿಜಯಹರಿ ರೈ ಬಳ್ಳಮಜಲು, ಸದಾಶಿವ ಶೆಟ್ಟಿ ಪಟ್ಟೆ,ಜನಾರ್ದನ ರೈ ಪಡ್ಡಂಬೈಲು, ನಾರಾಯಣ ಪೂಜಾರಿ ಕುರಿಕ್ಕಾರ, ಕುಂಬ್ರ ಡಿಆರ್‌ಎಸ್ ಟಯರ್ ಮಾಲಕ ದೀಕ್ಷಿತ್ ರೈ ಸೊರಕೆ, ಬೂಡಿಯಾರ್ ಗಣೇಶ್ ರೈ, ಡಿಂಬ್ರಿ ಗುಡ್ಡಪ್ಪ ರೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ನೂತನ ಉದ್ಯಮದ ಯಶಸ್ಸಿಗೆ ಶುಭಹಾರೈಸಿದರು.

ಆಲಡ್ಕ ಹೋಮ್ ಪ್ರೊಡಕ್ಟ್ಸ್‌ನ ಮುಖ್ಯಸ್ಥರಾಗಿರುವ ಕುಕ್ಕುಂಜೋಡು ಮಹಾಬಲ ರೈಯವರು ಅತಿಥಿಗಳನ್ನು ಸತ್ಕರಿಸಿ ಮಾತನಾಡಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಕಲಬೆರಕೆ ಪದಾರ್ಥಗಳಿಲ್ಲದ ಪಾನೀಯವಾಗಿರುವ ಕಪ್ಪು ದ್ರಾಕ್ಷೆ ಹಣ್ಣಿನ ರಸ ಇದೀಗ ಇಲ್ಲಿಯೂ ‘ಆಲಡ್ಕ ಹೋಂ ಪ್ರೊಡಕ್ಟ್ಸ್ ನ ಫ್ರೆಶ್ ಗ್ರೇಪ್ ಫ್ರೂಟ್ ಜ್ಯೂಸ್’ ಹೆಸರಿನಲ್ಲಿ ಪುತ್ತೂರಿನ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ರೈತರ ಉತ್ಪನ್ನಗಳನ್ನು ರೈತರಿಂದಲೇ ಖರೀದಿಸಿ ಸ್ವಾವಲಂಬಿಗಳನ್ನಾಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್ಎಂಇ)’ಗೆ ಪೂರಕವಾಗಿ ಈ ಗೃಹೋದ್ಯಮವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ ಯುವ ಸಮುದಾಯ ಹಾಗೂ ಅಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನವರಿಗೂ ಉಲ್ಲಾಸಭರಿತ ಆರೋಗ್ಯಕ್ಕೆ ಪೂರಕವಾದ ಕಪ್ಪು ದ್ರಾಕ್ಷೆ ಹಣ್ಣಿನ ರಸವನ್ನು ಸೇವಿಸಬಹುದಾಗಿದೆ. ಬೇಡಿಕೆಗೆ ತಕ್ಕ ಪ್ರಮಾಣದಲ್ಲಿ ಒದಗಿಸಿಕೊಡಲಾಗುತ್ತದೆ.ಕೆದಂಬಾಡಿ ಗ್ರಾಮದ ಕುಕ್ಕುಂಜೋಡ್ ಹೌಸ್‌ನಲ್ಲಿ ಇದರ ತಯಾರಿಕಾ ಘಟಕವಿದ್ದು ಯಾವುದೇ ಶುಭಸಮಾರಂಭಗಳಿಗೆ ರಖಂ ದರದಲ್ಲಿಯೂ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ ವಂದಿಸಿದರು.ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರ್ವಹಿಸಿದರು.

ಕುರಿಯ ಶಾಲಾ ಮಕ್ಕಳಿಗೆ ಜ್ಯೂಸ್ ವಿತರಣೆ: ಆಲಡ್ಕ ಹೋಂ ಪ್ರೊಡಕ್ಟ್ಸ್‌ನ ಮುಖ್ಯಸ್ಥ ಮಹಾಬಲ ರೈಯವರು ತಾನು ಕಲಿತ ಕುರಿಯ ಹಿ.ಪ್ರಾ.ಶಾಲಾ ಮಕ್ಕಳಿಗೆ ಕಪ್ಪು ದ್ರಾಕ್ಷೆ ಹಣ್ಣಿನ ರಸವನ್ನು ಉಚಿತವಾಗಿ ನೀಡಿದರು.

ಏಜೆನ್ಸಿ ಬೇಕಾದಲ್ಲಿ…
ಆಲಡ್ಕ ಹೋಂ ಪ್ರೊಡಕ್ಟ್ಸ್‌ನ ಕಪ್ಪು ದ್ರಾಕ್ಷೆ ಹಣ್ಣಿನ ಜ್ಯೂಸ್ ವಿತರಣಾ ಏಜೆನ್ಸಿಯನ್ನೂ ನೀಡಲಾಗುವುದು.ಆಸಕ್ತರು ಮಾಹಿತಿಗಾಗಿ
ಮಹಾಬಲ ರೈ ಕುಕ್ಕುಂಜೋಡು
(ಮೊ:9164991719)ಯಾ ಹರೀಶ್ ಬಿಜತ್ರೆ
(ಮೊ:9880310628)ರವರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here