ಅ.3: ಬೊಳುವಾರಿನಲ್ಲಿ ಮಹಿಷಮರ್ದಿನಿ ಯಕ್ಷಗಾನ ಪ್ರದರ್ಶನ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಮತ್ತು ಯಕ್ಷಕೂಟ ಪುತ್ತೂರು ಸಹಯೋಗದೊಂದಿಗೆ ಬೊಳುವಾರು ಆಂಜನೇಯ ವೃತ್ತದ ಬಳಿ ಅ.3ರಂದು ರಾತ್ರಿ ಗಂಟೆ 7 ರಿಂದ ’ಮಹಿಷ ಮರ್ದಿನಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ರಮೇಶ್ ಭಟ್ ಪುತ್ತೂರು, ವಿಷ್ಣುಪ್ರಸಾದ್ ಕಲ್ಲೂರಾಯ, ಪಿ.ಜಿ.ಜಗನ್ನಿವಾಸ ರಾವ್, ಬೆಳ್ಳಾರೆ ಗಣೇಶ್ ಭಟ್, ರಾಮಪ್ರಕಾಶ ಕಲ್ಲೂರಾಯ, ಅಮೋಘ ಕುಂಟಿನಿ, ಅಂಜನ್ ಕಜೆ ಅವರ ಹಿಮ್ಮೇಳನದೊಂದಿಗೆ ಮುಮ್ಮೇಳದಲ್ಲಿ ನಾ.ಕಾರಂತ ಪೆರಾಜೆ, ಡಾ. ಗೋವಿಂದ ಪ್ರಸಾದ್ ಕಜೆ, ವೆಂಕಟೇಶ್ ಕಲ್ಲುಗುಂಡಿ, ರಮೇಶ್ ಕಜೆ, ಡಾ. ಸಿಬಂದಿ ಪದ್ಮನಾಭ, ಆರತಿ ಪಟ್ರಮೆ, ಶಶಾಂಕ ನೆಲ್ಲಿತ್ತಾಯ, ಶಿವಶಂಕರ ಮಣಿಲ, ನಿಶಾ ಮಣಿಲ, ಈಶಾನ್ಯ ಪದ್ಯಾಣ, ಕೇಶವ ಕೃಷ್ಣ ಬರೆಪ್ಪಾಡಿ, ಶ್ರೀವಿದ್ಯಾ ಜೆ.ರಾವ್, ವೈಷ್ಣವೀ ಜೆ.ರಾವ್, ಶ್ರೀಕೃಷ್ಣ ಜೆ ರಾವ್, ಭವಿಷ್ ಭಂಡಾರಿ, ಖುಷಿ ಶರ್ಮ, ಮಂದಿರಾ ಕಜೆ, ಸಂವೃತಶರ್ಮ, ಮನಿಷಾ ಕಜೆ ಮತ್ತಿರರು ಭಾಗವಹಿಸಲಿದ್ದು, ವೆಂಕಟೇಶ್ ಮಯ್ಯ ಖಂಡಿಗೆ ಅವರು ವೇಷ ಭೂಷಣ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here