ಶಾಂತಿನಗರದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಅಪರಿಚಿತ ವ್ಯಕ್ತಿ ಉಪ್ಪಿನಂಗಡಿ‌ ಪೊಲೀಸರ ವಶ

0

 

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಪರಿಸರದಲ್ಲಿ‌ ಅ.3ರಂದು ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನನ್ನು ಸ್ಥಳೀಯ ಯುವಕರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಶಾಂತಿನಗರ ಪರಿಸರದಲ್ಲಿ ಅಲೆದಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ವಿಚಾರಿಸಿದಾಗ ಆತ ವಿಚಿತ್ರವಾಗಿ ವರ್ತಿಸಿದ್ದ.‌ ಅಲ್ಲದೆ, ಪಕ್ಕದ ವಿವಿಧ ಸ್ಥಳಗಳಿಗೆ ಓಡಾಡಿ ತಲೆ ಮರೆಸಿಕೊಂಡಿದ್ದ.‌ ಬಳಿಕ ಈತನನ್ನು ಪತ್ತೆ ಹಚ್ಚಿದ ಯುವಕರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ‌ ನೀಡಿದ್ದರು.‌ ತಕ್ಷಣ ಆಗಮಿಸಿದ‌ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈತ ಮಲಯಾಲಂ‌ ಭಾಷೆ ಮಾತನಾಡುತ್ತಿದ್ದ ಕೇರಳ ಮೂಲದವನು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here