ಪುತ್ತೂರು: ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಪುತ್ತೂರು ತಾಲೂಕು ಆರ್ಯಪು ಗ್ರಾಮದ ಪಿಳಿಗುಂಡ ಮನೆಯ ದಿ.ಅಣ್ಣು ಅಜಲ ರವರ ಪುತ್ರ ಪ್ರವೀಣ್ (23 ವರ್ಷ)ರವರಿಗೆ ಗಾಂಧಿ ಜಯಂತಿಯಂದು ಪುತ್ತೂರಿನ “ಟೀಮ್ ಒಳಿತು ಮಾಡು ಮನುಷ” (ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್ ರಿ. ಪುತ್ತೂರು) ತಂಡದ 38ನೇಯ ಯೋಜನೆಯಾಗಿ 15,111ರೂ.ನ ಚೆಕ್ ವಿತರಿಸಲಾಯಿತು. ನೀಲಂ ಗಾರ್ಮೆಂಟ್ಸ್ ನ ರಮೇಶ್, ಫ್ರೆಂಡ್ಸ್ ಸ್ಪೋರ್ಟ್ಸ್ನ ಲೋಕೇಶ್ ಹಾಗೂ ಟ್ರಸ್ಟ್ನ ಸೇವಾ ಮಾಣಿಕ್ಯರಾದ ಕಲಾವಿದ ಕೃಷ್ಣಪ್ಪ ಶಿವನಗರ, ಮೋಹನ ಸಿಮ್ಮವನ, ಚೇತನ್ ಕುಮಾರ್ ಪುತ್ತೂರು, ಶೋಭಾ ಮಡಿವಾಳ, ವಸಂತಿ ಶೀಲಾ, ರಂಜನ್ ರೈ, ಲೋಕೇಶ್ ರೈ ಹಾಗೂ ಶುಭಾಷಿಣಿಯವರು ಉಪಸ್ಥಿತರಿದ್ದರು.