ಈಶ್ವರಮಂಗಲ: ಈದ್ ಮಿಲಾದ್ ಪ್ರಯುಕ್ತ ಕಾಲ್ನಡಿಗೆ ಜಾಥಾ

0

ಪುತ್ತೂರು: ಮೀಲಾದ್ ಐಕ್ಯವೇದಿಕೆ ಈಶ್ವರಮಂಗಲ ಇದರ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.
ಈಶ್ವರಮಂಗಲ ದರ್ಗಾದಿಂದ ಜಮಾ ಮಸೀದಿ ಖತೀಬರಾದ ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್‌ನೊಂದಿಗೆ ನಡೆದ ಕಾಲ್ನಾಡಿಗೆ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಈಶ್ವರಮಂಗಲ ಪಾಳ್ಯತ್ತಡ್ಕ ಮುಹಿಯದ್ದೀನ್ ಜಮಾ ಮಸೀದಿ ಜಮಾಅತರು, ತ್ವೈಬಾ ಎಜುಕೇಶನ್ ಸೆಂಟರ್ ಹಾಗೂ ಪರಿಸರ ಜಮಾಅತರು ಪಾಲ್ಗೊಂಡಿದ್ದರು. ಮೀಲಾದ್ ಐಕ್ಯ ವೇದಿಕೆ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕಾರ್ಯದರ್ಶಿ ಮಹಮ್ಮದ್ ಕುಂಞಿ ಇ.ಎ, ಪಾಳ್ಯತ್ತಡ್ಕ ಜಮಾಅತ್ ಅಧ್ಯಕ್ಷ ಖಾದರ್ ಹಾಜಿ ಹಿರಾ, ಈಶ್ವರಮಂಗಳ ಜಮಾ ಮಸೀದಿ ಅಧ್ಯಕ್ಷ ಟಿ.ಎ ಖಾದರ್ ಹಾಜಿ, ಕಾರ್‍ಯದರ್ಶಿ ಕೆ ಮಹಮ್ಮದ್, ತ್ವೈಬಾ ಎಜುಕೇಶನ್ ಸೆಂಟರ್ ಕಾರ್‍ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಎನ್.ಎಂ ಹಮೀದ್, ಕೆ.ಎಚ್ ಮಹಮ್ಮದ್ ಕುಂಞಿ, ಶಸುದ್ದೀನ್ ಬಿ.ಸಿ, ಮುಸ್ತಫಾ ಮಿನಿ ಮೇನಾಲ, ಅಬು ಮೇನಾಲ, ಹಾರಿಸ್ ಮೇನಾಲ, ಖಾದರ್ ಝುಹ್‌ರಿ, ಇಸ್ಮಾಯಿಲ್ ಎಂ.ಎ ಉಪಸ್ಥಿತರಿದ್ದರು. ಅಬ್ದುಲ್ಲಾ ಹನೀಫ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here