ಪಳ್ಳತ್ತಾರು ಮಸೀದಿಯಲ್ಲಿ ಈದ್ ಮೀಲಾದ್ ಆಚರಣೆ

0

ಕಾಣಿಯೂರು: ಮುಹಿಯುದ್ದೀನ್ ಜುಮಾ ಮಸೀದಿ ಇದರ ವತಿಯಿಂದ ಪೈಂಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಈದ್ ಮೀಲಾದ್ ಆಚರಿಸಲಾಯಿತು.ಅ 8 ರಂದು ಅಸರ್ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.ಪಳ್ಳತ್ತಾರು ಜಮಾಅತ್ ಅಧ್ಯಕ್ಷ ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಮದ್ರಸ ಅಧ್ಯಾಪಕ ಕಲಾಮ್ ಝುಹ್ರಿ ಸ್ವಾಗತಿಸಿದರು.ಜಮಾಅತ್ ಖತೀಬ್ ಮುಶ್ತಾಕ್ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮದ್ರಸ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.

ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.ತೀರ್ಪುಗಾರರಾಗಿ ಇಲ್ಯಾಸ್ ಅಂಜದಿ ಕೂರತ್,ಸಮದ್ ಮುಈನಿ ಕರಿಂಬಿಲ ಸಹಕರಿಸಿದರು.ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಉಸ್ಮಾನ್, ಕಾರ್ಯದರ್ಶಿ ನವಾಝ್ ಸಖಾಫಿ,ಉಪ್ಪಂಞಿ ಹಾಜಿ ಬನಾರಿ,ಶೇಖ್ ಹಾಜಿ ಬನಾರಿ,ಯೂಸುಫ್ ಗುಂಡಿನಾರು,ಅಧ್ಯಾಪಕರಾದ ಜಲೀಲ್ ಮುಈನಿ,ಶಿಹಾಬುದ್ದೀನ್ ಫಾಳಿಲಿ ಸೇರಿದಂತೆ ಜಮಾಅತಿನ ಪದಾಧಿಕಾರಿಗಳು,ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅ 9ರಂದು ಬೆಳಿಗ್ಗೆ ಪಳ್ಳತ್ತಾರು- ಬರೆಪ್ಪಾಡಿ- ಬೆಳಂದೂರು ಮಾರ್ಗವಾಗಿ ದಫ್ ಪ್ರದರ್ಶನದೊಂದಿಗೆ ಪ್ರವಾದಿಯವರ ಗುಣಗಾನ ಮಾಡುತ್ತಾ ಕಾಲ್ನಡಿಗೆ ಜಾಥಾ ನಡೆಯಿತು.ಪಳ್ಳತ್ತಾರು ಬೆಳಂದೂರು ಪರಿಸರದ ನೂರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here