ನೆಲ್ಯಾಡಿ: ಪಂಚಾಯತ್ ರಸ್ತೆ ಅತಿಕ್ರಮಿಸಿ ಅಕ್ರಮ ಕಟ್ಟಡ, ತಡೆಗೋಡೆ ನಿರ್ಮಾಣ-ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಗ್ರಾ.ಪಂ.ಗೆ ಮನವಿ

0

ನೆಲ್ಯಾಡಿ: ಕೌಕ್ರಾಡಿ ಗ್ರಾ.ಪಂ.ಗೊಳಪಟ್ಟ ನೆಲ್ಯಾಡಿ ಪೇಟೆಯಿಂದ ಕುಂಡಡ್ಕ ಪ್ರದೇಶಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಅತಿಕ್ರಮಿಸಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡ ಮತ್ತು ತಡೆಗೋಡೆ ತೆರವುಗೊಳಿಸುವಂತೆ ಆ ಭಾಗದ ಗ್ರಾಮಸ್ಥರು ಕೌಕ್ರಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ನೆಲ್ಯಾಡಿ ಪೇಟೆಯಿಂದ ಕುಂಡಡ್ಕ ಪ್ರದೇಶಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿಯಾಳುಗಳು ಅವರವರ ದಿನನಿತ್ಯದ ವ್ಯವಹಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಸದ್ರಿ ರಸ್ತೆಯು ಮೊದಲೇ ಕಿರಿದಾಗಿದ್ದು ಅತೀ ಕಷ್ಟದಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗುವಂತಹ ಪರಿಸ್ಥಿತಿ ಇದ್ದು ವಾಹನಗಳು ಬರುತ್ತಿರುವಾಗ ಸಾರ್ವಜನಿಕರು ನಡೆದುಹೋಗಲು ಕಷ್ಟಕರವಾಗಿದೆ. ಇದೀಗ ಸದ್ರಿ ಕಿರಿದಾದ ರಸ್ತೆಯ ನೆಲ್ಯಾಡಿ ಪೇಟೆಯ ಹತ್ತಿರ ಕೆಲವರು ರಸ್ತೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ಮತ್ತು ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಸದ್ರಿ ಕಾಮಗಾರಿಯಿಂದ ಮೊದಲೇ ಇಕ್ಕಟ್ಟಾದ ರಸ್ತೆಯು ಇನ್ನೂ ಕಿರಿದಾಗಿದೆ. ಇದರಿಂದಾಗಿ ಸದ್ರಿ ಪರಿಸರದ ಜನರಿಗೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಸದ್ರಿ ರಸ್ತೆಯ ಒತ್ತುವರಿ ಹಾಗೂ ಅಕ್ರಮ ಕಟ್ಟಡ ಮತ್ತು ತಡೆಗೋಡೆಗಳನ್ನು ತೆರವುಗೊಳಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ. ಮನವಿಯ ಪ್ರತಿಯನ್ನು ಜಿಲ್ಲಾಽಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಽಕಾರಿ, ಕಡಬ ತಾ.ಪಂ.,ತಹಶೀಲ್ದಾರ್, ಕಡಬ ತಾ.ಪಂ.ಅಭಿಯಂತರರು, ದ.ಕ.ಜಿಲ್ಲಾ ಪಂಚಾಯತ್ ಅಭಿಯಂತರರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here